Advertisement

ಆರು ಅಂತಾರಾಜ್ಯ ಡಕಾಯಿತರ ಬಂಧನ

11:52 AM May 30, 2018 | Team Udayavani |

ಆನೇಕಲ್‌: ಒಂಟಿ ಮನೆ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಆರು ಮಂದಿ ಡಕಾಯಿತರನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ. ಕೇಶವನ್‌ (35) ಸತೀಶ್‌ (34) ಇಮ್ರಾನ್‌ (23), ರವಿ (29), ಶರವಣ(28), ವಿಜಯ್‌ (23) ಬಂಧಿತರು. ಸುರೇಶ್‌ ಹಾಗೂ ರಾಜು ತಲೆ ಮರೆಸಿಕೊಂಡಿದ್ದು, ಇವರೆಲ್ಲರೂ ತಮಿಳುನಾಡಿನ ನಿವಾಸಿಗಳಾಗಿದ್ದಾರೆ.

Advertisement

ಬಂಧಿತರು ಸೂರ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಮಸಾಗರ ಗ್ರಾಮದ ಡೇರಿ ನಾರಾಯಣರೆಡ್ಡಿ ಅವರ ಮನೆಗೆ ನುಗ್ಗಿ, ಪತ್ನಿ ಹಾಗೂ ಮಕ್ಕಳನ್ನು ಬೆದರಿಸಿ ಅವರ ಮೇಲೆ ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಚಿನ್ನದ ಚೈನ್‌ ಎರಡು ಮೊಬೈಲ್‌ ದರೋಡೆ ಮಾಡಿದ್ದರು.

ಬಂಧಿತರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆರೋಪಿ ಸತೀಶ್‌ನನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಅನುಗೊಂಡನಹಳ್ಳಿ ಠಾಣೆ ವ್ಯಾಪ್ತಿಯ ಶ್ರೀನಿವಾಸ್‌ರೆಡ್ಡಿ ಅವರ ಒಂಟಿ ಮನೆಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನಾಭರಣ ಲೂಟಿ ಮಾಡಿದ್ದರು. ಇವರ ಮೇಲೆ ತಮಿಳುನಾಡಿನ ವಿವಿಧ  ಠಾಣೆಗಳಲ್ಲಿ ಡಕಾಯಿತಿ ಮತ್ತು ಕೊಲೆ ಪ್ರಕರಣಗಳು ದಾಖಲಾಗಿದೆ.

ಆರೋಪಿಗಳಿಂದ 3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಜಿಲ್ಲಾ ಅಪರ ಪೊಲೀಸ್‌ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಉಮೇಶ್‌, ಸೂರ್ಯನಗರ ಪೋಲಿಸ್‌ ಠಾಣೆಯ ವೃತ್ತ ನಿರೀಕ್ಷಕ ಆನಂದ್‌ ನಾಯ್ಕ, ಪಿಎಸ್‌ಐ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next