Advertisement

ಪಾನಮತ್ತ ಸ್ಕೂಲ್‌ ಬಸ್‌ ಚಾಲಕನ ಬಂಧನ

11:20 AM Jul 23, 2017 | Team Udayavani |

ಬೆಂಗಳೂರು: ಕುಡಿದು ಶಾಲಾ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಚಾಲಕನೊಬ್ಬನನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಾರತ್ತ್ಹಳ್ಳಿ ನಿವಾಸಿ ಮುಕುಂದ್‌ (30) ಬಂಧಿತ. ಶಾಲಾ ವಾಹನ ವಶಕ್ಕೆ ಪಡೆದ ಪೊಲೀಸರು ಮಕ್ಕಳಿಗೆ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅವರನ್ನೆಲ್ಲ ಮನೆಗೆ ಕಳುಹಿಸಿದ್ದಾರೆ.

Advertisement

ಮುಕುಂದ್‌ ಮಾರತ್‌ಹಳ್ಳಿಯ ಮುನೇಕೊಳಲುನಲ್ಲಿರುವ ವಾಗೆವಿ ವಿಲಾಸ್‌ ಶಾಲಾ ವಾಹನ ಚಾಲಕನಾಗಿದ್ದು, ಶನಿವಾರ ಮಧ್ಯಾಹ್ನ ಶಾಲೆ ಮುಗಿದ ಬಳಿಕ ಸುಮಾರು 25 ವಿದ್ಯಾರ್ಥಿಗಳನ್ನು ಮನೆಗೆ ಬಿಡಲು ಶಾಲಾ ವಾಹನದಲ್ಲಿ ಕರೆದೊಯ್ಯುತ್ತಿದ್ದ. ಮಧ್ಯಾಹ್ನ 1.30ರ ಸುಮಾರಿಗೆ ಯಮಲೂರು ಜಂಕ್ಷನ್‌ ಬಳಿ ಎಚ್‌ಎಎಲ್‌ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಮೊಹಮ್ಮದ್‌ ಅವರು ತಮ್ಮ ಸಿಬ್ಬಂದಿ ಜತೆ ವಾಹನ ತಪಾಸಣೆ ನಡೆಸುತ್ತಿದ್ದರು.

ಈ ವೇಳೆ ಮಾರತ್ತಹಳ್ಳಿ ಮಾರ್ಗವಾಗಿ ಮುಕುಂದ್‌ ವೇಗವಾಗಿ ಶಾಲಾ ವಾಹನ ಓಡಿಸಿಕೊಂಡು ಬಂದ್ದಿದ. ಈ ಹಿನ್ನೆಲೆಯಲ್ಲಿ ವಾಹನ ತಡೆದ ಪೊಲೀಸರು ಚಾಲಕನನ್ನು ಪ್ರಶ್ನಿಸಿದ್ದರು. ಅಲ್ಲದೆ, ಆತನ ವರ್ತನೆಯಿಂದ ಅನುಮಾನಗೊಂಡು ಅಲ್ಕೋ ಮೀಟರ್‌ನಲ್ಲಿ ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next