Advertisement

ದನದ ಮಾಂಸ ಪತ್ತೆ: ಮೂವರ ಬಂಧನ

08:21 AM May 09, 2020 | sudhir |

ಶಿರ್ವ:  ಕಳತ್ತೂರು ಪೈಯ್ನಾರು ಬಳಿ ಹಾಜಬ್ಬ ಅವರ ವಾಸ್ತವ್ಯವಿಲ್ಲದ ಮನೆಯಲ್ಲಿ ದನ ಕಡಿದು ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರನ್ನು ಶಿರ್ವ ಪೊಲೀಸರು ಶುಕ್ರವಾರ ಬಂಧಿಸಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

Advertisement

ಆರೋಪಿಗಳಾದ ಬದ್ರುದ್ದೀನ್‌, ಶೇಕ್‌ ಅಬ್ದುಲ್ಲಾ ಮತ್ತು ಲವ ಶೆಟ್ಟಿಯನ್ನು ಠಾಣಾಧಿಕಾರಿ ಶ್ರೀಶೈಲ ಮುರಗೋಡ ಬಂಧಿಸಿದ್ದಾರೆ. ದನ ಕಡಿಯಲು ಬಳಸಿದ್ದ ಆಯುಧಗಳು, ತಕ್ಕಡಿ, ಸುಮಾರು 80 ಕೆ.ಜಿ. ದನದ ಮಾಂಸದ ಪ್ಯಾಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಂದು ದನವನ್ನು ರಕ್ಷಿಸಲಾಗಿದ್ದು, ಗೋಶಾಲೆಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಶಿರ್ವ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next