Advertisement

Grenade: ಐವರು ಶಂಕಿತ ಉಗ್ರರ ಬಳಿ ಸಿಕ್ಕಿದ್ದ 5 ಗ್ರೆನೇಡ್‌ ನಾಶ

01:27 PM Oct 21, 2023 | Team Udayavani |

ಬೆಂಗಳೂರು:  ರಾಜ್ಯ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದ್ದ ಐವರು ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ  ಪತ್ತೆಯಾಗಿರುವ 5 ಗ್ರೆನೇಡ್‌ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ನಿರ್ಜನ ಪ್ರದೇಶದಲ್ಲಿ ನಾಶ ಮಾಡಲಾಗಿದೆ.

Advertisement

ಗ್ರೆನೆಡ್‌ಗಳನ್ನು ನಾಶಪಡಿಸಲು ಸಿಸಿಬಿ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು. ಅನುಮತಿ ಸಿಕ್ಕಿದ ಕೂಡಲೇ ಐಎಸ್‌ಡಿ ಅಧಿಕಾರಿಗಳ ಜೊತೆ ಸೇರಿ ಸಿಸಿಬಿ ಪೊಲೀಸರು ಗ್ರೆನೇಡ್‌ ನಾಶ ಮಾಡಿದ್ದಾರೆ.

ಏನಿದು ಪ್ರಕರಣ?: ಜು.9ರಂದು ಬೆಂಗಳೂರಿನ ಆರ್‌ಟಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಐವರು ಉಗ್ರರನ್ನು ಬಂಧಿಸಿದ ಸಿಸಿಬಿ ಪೊಲೀಸರು, ಪಿಸ್ತೂಲ್, 4 ವಾಕಿಟಾಕಿ, ಫೋನ್‌, 5 ಜೀವಂತ ಗ್ರೆನೇಡ್‌ ಜಪ್ತಿ ಮಾಡಿದ್ದರು. ತನಿಖೆ ನಡೆಸಿದಾಗ ಬೆಂಗಳೂರಿನ ಭದ್ರಪ್ಪ ಲೇಔಟ್‌ನ ಮನೆಯ ರೂಮ್‌ ನಲ್ಲಿ 4 ಗ್ರೆನೇಡ್‌ ಬಟ್ಟೆಯಲ್ಲಿ ಸುತ್ತಿ ಬೀರುವಿನಲ್ಲಿ ಇಟ್ಟಿರುವುದು ಪತ್ತೆಯಾಗಿತ್ತು. 4 ಹ್ಯಾಂಡ್‌ ಗ್ರೆನೇಡ್‌ಅನ್ನು ಪ್ರಕರಣ ರೂವಾರಿ ಜುನೈದ್‌ ಪಾರ್ಸೆಲ್‌ ಕಳಿಸಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next