Advertisement

ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಲು ದೇಶಪಾಂಡೆ ಸೂಚನೆ

09:44 PM Jun 20, 2019 | Team Udayavani |

ಮಡಿಕೇರಿ: ಕಳೆದ ಸಾಲಿನ ಜಲಪ್ರಳಯದಲ್ಲಿ ಸಂತ್ರಸ್ತರಾದವರಿಗೆ ಮನೆ ನಿರ್ಮಿಸಿಕೊಡಲು ಜಾಗ ಗುರುತಿಸಲಾಗಿದ್ದರೂ, ಅಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಇನ್ನೂ ಅನುಮತಿ ನೀಡದಿರುವ ಬಗ್ಗೆ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬುಧವಾರ ನಡೆದ ಪವಾಹ-ಬರ ಪರಿಹಾರ ಕ್ರಮಗಳು ಹಾಗೂ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪುನರ್ವಸತಿ ಕೆಲಸಗಳು ಸಮರೋ ಪಾದಿಯಲ್ಲಿ ನಡೆಯಬೇಕಿದೆ. ಆದರೆ ಕಳೆದ ಡಿಸೆಂಬರ್‌ನಲ್ಲಿ ಕಂದಾಯ ಇಲಾಖೆ ಜಮೀನು ಮಂಜೂರು ಮಾಡಿದ್ದರೂ, ಅರಣ್ಯ ಇಲಾಖೆ ಗಾಳಿಬೀಡು ಗ್ರಾಮದ ಜಾಗದಲ್ಲಿರುವ ಮರಗಳನ್ನು ಕಡಿಯಲು ಅನುಮತಿ ನೀಡದಿರಲು ಕಾರಣವೇನು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಪ್ರಶ್ನಿಸಿದರು. ಈ ಸಂದರ್ಭ ತಾನು ನಾಲ್ಕು ದಿನಗಳ ಹಿಂದೆಯಷ್ಟೇ ಮಡಿಕೇರಿ ಉಪ ವಿಭಾಗದ ಪ್ರಭಾರ ವಹಿಸಿಕೊಂಡಿದ್ದು, ಅರ್ಜಿ ಯಾವಾಗ ಬಂದಿದೆ ಎಂಬ ಮಾಹಿತಿ ಇಲ್ಲ ಎಂದು ಮರಿಯ ಕ್ರಿಸ್ತರಾಜು ತಿಳಿಸಿ ದರು. ಇದರಿಂದ ಆಕ್ರೋಶಗೊಂಡ ಸಚಿವರು, ಮಾಹಿತಿ ಇಲ್ಲದೆ ನೀವು ಸಭೆಗೆ ಯಾಕೆ ಬರುತ್ತೀರಿ. ನೀವು ಹೊಸದಾಗಿ ಬಂದಿದ್ದರೆ, ಸಭೆಗೆ ಬರುವಾಗ ವಲಯ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆಯಬೇಕಿತ್ತು. ಈಗಲೂ 15 ನಿಮಿಷ ಕಾಲಾವಕಾಶ ಕೊಡುತ್ತೇನೆ. ಸಭೆಯಿಂದ ಹೊರಹೋಗಿ ಸಂಬಂಧಿಸಿದ ಕಡತವನ್ನು ಕಚೇರಿ ಸಿಬಂದಿ ಮೂಲಕ ತರಿಸಿ ಮಾಹಿತಿ ನೀಡಿ ಎಂದು ಗುಡುಗಿದರು.
ಸಂತ್ರಸ್ತರ ಹಾಗೂ ಪರಿಹಾರ ವಿತರಣೆಗೆ ಸಂಬಂಧಿಸಿದ ಪಟ್ಟಿಯನ್ನು ಜನಪ್ರತಿನಿಧಿ ಗಳಿಗೆ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಆದೇಶಿಸಿ 15 ದಿನಗಳು ಕಳೆದರೂ ಇದುವರೆಗೂ ಆ ಪಟ್ಟಿ ಕೈಸೇರದಿರುವ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಸುನಿಲ್‌ ಸುಬ್ರಮಣಿ ಗಮನಸೆಳೆದರು.

ಒಂದು ಹಂತದಲ್ಲಿ ಸಚಿವ ದೇಶಪಾಂಡೆ ಅವರಂತೂ, ನಿಮಗೆ ಅಮಾನತು ಬೇಕೋ ಅಥವಾ ವರ್ಗಾವಣೆ ಬೇಕೋ ಎಂದು ನೇರವಾಗಿ ತಹಶೀಲ್ದಾರ್‌ ಗೋವಿಂದರಾಜು ಅವರನ್ನು ಪ್ರಶ್ನಿಸಿದದರು.

ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಸಾರ್ವಜನಿಕರಿಗಾಗುತ್ತಿರುವ ಕಿರುಕುಳ, ದೌರ್ಜನ್ಯದ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುನಿಲ್‌ ಸುಬ್ರಮಣಿ ಎಳೆಎಳೆಯಾಗಿ ಸಚಿವರಿಗೆ ವಿವರಿಸಿದರು. ವೀರಾಜಪೇಟೆ ತಹಶೀ ಲ್ದಾರರು ಯಾವುದೇ ಅರ್ಜಿಗಳನ್ನು ವಿಲೇ ವಾರಿ ಮಾಡದೆ ಉಳಿಸಿಕೊಂಡಿರುವ ಬಗ್ಗೆಬೋಪಯ್ಯ ಅವರು ಕಂದಾಯ ಸಚಿವರ ಗಮನಸೆಳೆದರು.

Advertisement

ಈ ಸಂದರ್ಭ ಮಾತನಾಡಿದ ದೇಶಪಾಂಡೆ ಅವರು, ವೀರಾಜಪೇಟೆ ತಹಶೀ ಲ್ದಾರರ ಬಗ್ಗೆ ಜನರ ಆಕ್ರೋಶವಿರು ವುದು ನನ್ನ ಗಮನಕ್ಕೂ ಬಂದಿದೆ. ತಾ. ಪಂ.ಸಭೆ ಗಳಿಗೂ ಹಾಜರಾಗದೆ ಉದ್ದಟತನ ಪ್ರದರ್ಶಿಸಿ ರುವ ಬಗ್ಗೆ ತಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಮುಂಜಾನೆಯೇ ದೂರು ನೀಡಿದ್ದಾರೆ. ನೀವಿನ್ನೂ ಯುವಕ. ಅದಲ್ಲದೆ ಪೊ›ಬೆಷನರಿ ಅವಧಿಯಲ್ಲಿದ್ದೀರಿ. ಜನರ ಪರವಾಗಿ ಕೆಲಸ ಮಾಡುವುದನ್ನು ಈಗಿನಿಂದಲೇ ಕಲಿತುಕೊಳ್ಳಿ. ನೀವು ಜನರಿಗೆ ಗೌರವ ನೀಡಿದರೆ ಜನರೂ ನಿಮ್ಮನ್ನು ಗೌರವಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನಿಮಗೆ ಸಸ್ಪೆಂಡ್‌ ಬೇಕೋ ಟ್ರಾನ್ಸ್‌ ಫ‌ರ್‌ ಬೇಕೋ ಎಂಬು ದನ್ನು ನಿರ್ಧರಿಸಿ. ನಿಮ್ಮ ಬಗ್ಗೆ ಬಂದಿರುವ ದೂರುಗಳ ಬಗ್ಗೆ ಜಿಲ್ಲಾಧಿಕಾರಿ ಯವರಿಂದಲೂ ವರದಿ ತರಿಸಿದ್ದೇನೆ ಎಂದರು.

ಸಾ.ರಾ. ಮಹೇಶರಿಂದ ಅಧಿಕಾರಿಗೆ ತರಾಟೆ
ಈ ನಡುವೆ ಸಭೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಕೂಡಾ ಮರಿಯ ಕ್ರಿಸ್ತರಾಜು ಅವರ ವಿರುದ್ಧ ಹರಿಹಾಯ್ದರು. ಜಿಲ್ಲಾ ಉಸ್ತುವಾರಿ ಸಚಿವನಾಗಿ ತಾನು ಕರೆದ ಸಭೆಗೆ ಹಾಜರಾಗದೆ ಎಲ್ಲಿ ಹೋಗಿದ್ದಿರಿ ಎಂದು ತರಾಟೆಗೆ ತೆಗೆದುಕೊಂಡರು. ತಾನು ಸರಕಾರದ ಕಾರ್ಯದರ್ಶಿಯವರ ಸಭೆಯಲ್ಲಿ ಭಾಗವಹಿಸಿದ್ದುದಾಗಿ ಅಧಿಕಾರಿ ಸಮಜಾಯಿಷಿಕೆ ನೀಡಿದರಾದರೂ, ನೀವು ಎಲ್ಲಿಗೆ ಹೋಗಿದ್ದೀರಿ, ಏನು ಮಾಡಿದ್ದೀರಿ ಎಂಬುದರ ಬಗ್ಗೆ ವರದಿ ನೀಡುವಂತೆ ಈಗಾಗಲೇ ಸಂಬಂಧಿಸಿದವರಿಗೆ ತಿಳಿಸಿದ್ದೇನೆ ಎಂದು ಸಚಿವ ಮಹೇಶ್‌ ಅವರು ತಿಳಿಸಿದರು.

ಇತ್ತೀಚೆಗೆ ನಡೆದ ತಾಲೂಕು ಪಂಚಾಯತ್‌ ಸಭೆಗೆ ಹಾಜರಾಗದ ವೀರಾಜಪೇಟೆ ತಹಶೀಲ್ದಾರರು ಹಾಗೂ ಉಸ್ತುವಾರಿ ಸಚಿವರು ಕರೆದಿದ್ದ ಸಭೆಗೆ ಹಾಜರಾಗದ ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಸಚಿವರು ಹಾಗೂ ಶಾಸಕರಿಂದ ತರಾಟೆಗೆ ಒಳಗಾದರು.

Advertisement

Udayavani is now on Telegram. Click here to join our channel and stay updated with the latest news.

Next