Advertisement

ಗೆಲುವಿಗಾಗಿ ದೇಶಪಾಂಡೆ ಶತಚಂಡಿ ಹೋಮ

07:30 AM Apr 30, 2018 | |

ಹಳಿಯಾಳ: ಪಟ್ಟಣದ ಪ್ರಸಿದ್ಧ ತುಳಜಾಭವಾನಿ ದೇವಸ್ಥಾನದಲ್ಲಿ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ಕುಟುಂಬದವರು ಶತಚಂಡಿ ಹೋಮ ನೆರವೇರಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದ 25 ಪುರೋಹಿತರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಮೂರು ದಿನಗಳಿಂದ ಗಣಪತಿ ಹೋಮ, ನವಗ್ರಹ ಹೋಮ, ಸಚಿವರ ಕುಲದೇವತೆ ತುಳಜಾಭವಾನಿ ದೇವಿ ಹೋಮ ಸೇರಿ ಶತಚಂಡಿ ಹೋಮ ನೆರವೇರಿಸಲಾಯಿತು.

Advertisement

ಹಳಿಯಾಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಸಚಿವ ಆರ್‌.ವಿ.ದೇಶಪಾಂಡೆ, ಪತ್ನಿ ರಾಧಾಬಾಯಿ, ಮಕ್ಕಳಾದ ಪ್ರಶಾಂತ ಹಾಗೂ ಪ್ರಸಾದ ದೇಶಪಾಂಡೆ ಪಾಲ್ಗೊಂಡಿದ್ದರು. 1983ರಿಂದ ಸತತ ಗೆಲುವು ಸಾಧಿ ಸುತ್ತಾ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ದೇಶಪಾಂಡೆ, 7ನೇ ಬಾರಿ ಸ್ಪರ್ಧಿಸಿದಾಗ 2008ರಲ್ಲಿ ಸೋಲು ಕಂಡಿದ್ದರು. ಬಳಿಕ 2013ರಲ್ಲಿ ಮತ್ತೆ 8ನೇ ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಗ ಅವರ ಕುಲದೇವರಾದ ತುಳಜಾಭವಾನಿ ದೇವಸ್ಥಾನದಲ್ಲಿ ಹೋಮ ನೆರವೇರಿಸಲಾಗಿತ್ತು. ಈಗ ಮತ್ತೆ 9ನೇ ಬಾರಿ ಸ್ಪರ್ಧಿಸಿರುವ ದೇಶಪಾಂಡೆ 8ನೇ ಬಾರಿ ವಿಧಾನಸಭೆ ಪ್ರವೇಶಿಸಲು ಎಲ್ಲಿಲ್ಲದ ಕಸರತ್ತು ನಡೆಸಿದ್ದು ದೇವರ ಮೊರೆ ಕೂಡ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next