Advertisement

Kustagi: ವೀರಸಾವರ್ಕರ್ ಬಗ್ಗೆ ಅವಹೇಳನಕಾರಿ ಬರಹ: ಪ್ರಕರಣ ದಾಖಲು

10:17 PM May 29, 2024 | Team Udayavani |

ಕುಷ್ಟಗಿ: ತಾಲೂಕಿನ ದೋಟಿಹಾಳದ ವ್ಯಕ್ತಿಯೋರ್ವ ತನ್ನ ಫೇಸ್ ಬುಕ್ ಖಾತೆಯಲ್ಲಿ ವೀರಸಾವರ್ಕರ್ ಬಗ್ಗೆ ಅವಹೇಳನಕಾರಿ ಬರಹದ ಹಿನ್ನೆಲೆಯಲ್ಲಿ ಆತನ ವಿರುದ್ದ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹುಸೇನಸಾಬ್ ಲಾಡಸಾಬ್ ಕೊಳ್ಳಿ ಈತ ದೋಟಿಹಾಳ ಗ್ರಾಮದಲ್ಲಿ ವೆಲ್ಡಿಂಗ್ ಶಾಪ್ ಹೊಂದಿದ್ದ. ಸದರಿ ವ್ಯಕ್ತಿ ಫೇಸ್ ಬುಕ್ ಖಾತೆಯಲ್ಲಿ ವೀರಸಾವರರ್ಕರ್ ಫೋಟೋ ಎಡಿಟ್ ಮಾಡಿ, ರಣ ಹೇಡಿ ಸಾರ್ವರ್ಕರ್ ಫಸ್ಟ್ ಟೆರರಿಸ್ಟ್ ಇನ್ ಇಂಡಿಯ ಎಂದು ಬರೆದುಕೊಂಡಿದ್ದ. ಈ ವಿಷಯ ಪೊಲೀಸ್ ಇಲಾಖೆಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪೋಲೀಸರು ಸ್ವಯಂ ದೂರು ದಾಖಲಿಸಿಕೊಂಡು ವಶಕ್ಕೆ ತೆಗೆದುಕೊಂಡಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Kadaba ನ್ಯಾಯಾಲಯದಲ್ಲಿ ಖಾಸಗಿ ದೂರು: ಕೊಂಬಾರಿನ ಐವರ ವಿರುದ್ಧ ಪ್ರಕರಣ ದಾಖಲು 

Advertisement

Udayavani is now on Telegram. Click here to join our channel and stay updated with the latest news.

Next