Advertisement

ದೇವಧರ್‌ ಟ್ರೋಫಿ ಕ್ರಿಕೆಟ್‌: ಪಶ್ಚಿಮಕ್ಕೆ ಪ್ರಿಯಾಂಕ್‌ ಪಾಂಚಾಲ್‌ ನಾಯಕ

11:22 PM Jul 10, 2023 | Team Udayavani |

ಮುಂಬಯಿ: ಮೂರು ವರ್ಷಗಳ ಬಳಿಕ ಪುನರಾಂಭಗೊಳ್ಳಲಿರುವ “ದೇವಧರ್‌ ಟ್ರೋಫಿ’ ಏಕದಿನ ಪಂದ್ಯಾವಳಿಗಾಗಿ ಪಶ್ಚಿಮ ವಲಯ ಹಾಗೂ ಉತ್ತರ ವಲಯ ತಂಡಗಳನ್ನು ಪ್ರಕಟಿಸಲಾಗಿದೆ. ಕ್ರಮವಾಗಿ ಪ್ರಿಯಾಂಕ್‌ ಪಾಂಚಾಲ್‌ ಮತ್ತು ನಿತೀಶ್‌ ರಾಣಾ ಈ ತಂಡಗಳನ್ನು ಮುನ್ನಡೆಸುವರು.
2019-20ರಲ್ಲಿ ಕೊನೆಯ ಸಲ ದೇವಧರ್‌ ಟ್ರೋಫಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಅನಂತರ ಕೋವಿಡ್‌ ಕಾರಣದಿಂದ ನಿಲ್ಲಿಸಲಾಗಿತ್ತು. ಜು. 24ರಿಂದ ಆ. 3ರ ತನಕ ಎಲ್ಲ ಪಂದ್ಯಗಳು ಪುದುಚೇರಿಯಲ್ಲಿ ಸಾಗಲಿವೆ.

Advertisement

ಪಶ್ಚಿಮ ವಲಯ: ಪಾಂಚಾಲ್‌ (ನಾಯಕ), ಪೃಥ್ವಿ ಶಾ, ರಾಹುಲ್‌ ತ್ರಿಪಾಠಿ, ಹಾರ್ವಿಕ್‌ ದೇಸಾಯಿ, ಹೆಟ್‌ ಪಟೇಲ್‌, ಸರ್ಫರಾಜ್‌, ಅಂಕಿತ್‌ ಬವೆ, ಸಮರ್ಥ್ ವ್ಯಾಸ್‌, ದುಬೆ, ಅತೀತ್‌ ಸೇಠ್ , ಪಾರ್ಥ್ ಭಟ್‌, ಶಮ್ಸ್‌ ಮುಲಾನಿ, ಅರ್ಜಾನ್‌ ನಾರ್ಗಸ್ವಾಲ, ಚಿಂತನ್‌ ಗಜ, ರಾಜವರ್ಧನ್‌ ಹಂಗರ್ಗೆಕರ್‌.

Advertisement

Udayavani is now on Telegram. Click here to join our channel and stay updated with the latest news.

Next