Advertisement

ಮೀನು ಮಾರಾಟಕ್ಕೆ ಅವಕಾಶ ನಿರಾಕರಣೆ: ಖಂಡನೆ

03:50 AM Jul 11, 2017 | Team Udayavani |

ಪಣಂಬೂರು: ನವಮಂಗಳೂರು ಬಂದರು ಯಾರ್ಡ್‌ ಹಾಗೂ ಕೋಸ್ಟ್‌ ಗಾರ್ಡ್‌ ಕೇಂದ್ರ ಕಚೇರಿ ಬಳಿ ನಾಡ ದೋಣಿ ಮೀನು ಮಾರಾಟಕ್ಕೆ ಅವಕಾಶ ನೀಡದೆ ಇರುವ ಕಾರಣ ಮೀನುಗಾರರು ಅಸಮಾಧಾನಗೊಂಡಿದ್ದು, ಘಟನೆಯನ್ನು ನವಮಂಗಳೂರು ನಾಡ ದೋಣಿ ಮೀನುಗಾರರ ಸಂಘಟನೆ ಖಂಡಿಸಿದೆ.

Advertisement

ಹಲವು ವರ್ಷಗಳಿಂದ ಪಣಂಬೂರು ಬೀಚ್‌ ಬಳಿಯಲ್ಲಿ ನಾಡ ದೋಣಿ ಮೂಲಕ ಹಿಡಿದು ತಂದ ಮೀನುಗಳನ್ನು ಏಲಂ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಭದ್ರತೆಯ ನೆಪ ಹೇಳಿ ಕೋಸ್ಟ್‌ ಗಾರ್ಡ್‌ ಕೇಂದ್ರ ಕಚೇರಿ ಬಳಿ ಇರುವ ಬಂದರು ಜಾಗದಲ್ಲಿ ಮಾರಾಟ ವ್ಯವಹಾರವನ್ನು ಎತ್ತಂಗಡಿ ಮಾಡಲಾಗಿದೆ.ಕಳೆದ ಕೆಲವು ದಿನಗಳಿಂದ ಪಣಂಬೂರು ಬೀಚ್‌ ರಸ್ತೆಯ ಉದ್ದಕ್ಕೂ ಮೀನು ಮಾರಾಟ ಮಾಡಲಾಗುತ್ತಿದೆ. 

ರಸ್ತೆಯಲ್ಲಿಯೇ ಏಲಂ ಮಾಡಲಾಗುತ್ತಿದೆ. ಮೀನು ಮಾರಾಟ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೋಸ್ಟ್‌ ಗಾರ್ಡ್‌  ಡಿಜಪಿ ದಸೀಲಾ ಭದ್ರತೆಯ ಕಾರಣದಿಂದ ಹೆಲಿಪ್ಯಾಡ್‌ ಜಾಗದಲ್ಲಿ ಮೀನು ಮಾರಾಟಕ್ಕೆ ಅನುಮತಿ ನೀಡಲಾಗಿಲ್ಲ ಎಂದಿದ್ದಾರೆ.
ವಲಯ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ವಾಸುದೇವ ಪ್ರತಿಕ್ರಿಯಿಸಿ ಕೇವಲ ಎರಡು ತಿಂಗಳು ಮಾತ್ರ ಮಾಡುತ್ತೇವೆ. ಬಳಿಕ ದಕ್ಕೆಯಲ್ಲಿಯೇ ಮಾಡುತ್ತಿದ್ದೇವೆ. ಇದುವರೆಗೆ ರಕ್ಷಣೆಗೆ ನಮ್ಮಿಂದಾದ ಸಹಕಾರ ನೀಡುತ್ತಾ ಬಂದಿದ್ದೇವೆ. ಈ ಭಾಗದಲ್ಲಿ ಇದುವರೆಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಹೇಳಿದ್ದಾರೆ.

ಮಂಗಳವಾರ ಸಾಮೂಹಿಕ ಪ್ರಾರ್ಥನೆ ಮಂಗಳೂರು ಉರ್ವ ಮಾರಿಯಮ್ಮ ದೇವಸ್ಥಾನ ದಲ್ಲಿ ಮೀನುಗಾರರು ಸಾಮೂಹಿಕ ಪ್ರಾರ್ಥನೆ ಮಾಡಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next