Advertisement
ಹಲವು ವರ್ಷಗಳಿಂದ ಪಣಂಬೂರು ಬೀಚ್ ಬಳಿಯಲ್ಲಿ ನಾಡ ದೋಣಿ ಮೂಲಕ ಹಿಡಿದು ತಂದ ಮೀನುಗಳನ್ನು ಏಲಂ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಭದ್ರತೆಯ ನೆಪ ಹೇಳಿ ಕೋಸ್ಟ್ ಗಾರ್ಡ್ ಕೇಂದ್ರ ಕಚೇರಿ ಬಳಿ ಇರುವ ಬಂದರು ಜಾಗದಲ್ಲಿ ಮಾರಾಟ ವ್ಯವಹಾರವನ್ನು ಎತ್ತಂಗಡಿ ಮಾಡಲಾಗಿದೆ.ಕಳೆದ ಕೆಲವು ದಿನಗಳಿಂದ ಪಣಂಬೂರು ಬೀಚ್ ರಸ್ತೆಯ ಉದ್ದಕ್ಕೂ ಮೀನು ಮಾರಾಟ ಮಾಡಲಾಗುತ್ತಿದೆ.
ವಲಯ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ವಾಸುದೇವ ಪ್ರತಿಕ್ರಿಯಿಸಿ ಕೇವಲ ಎರಡು ತಿಂಗಳು ಮಾತ್ರ ಮಾಡುತ್ತೇವೆ. ಬಳಿಕ ದಕ್ಕೆಯಲ್ಲಿಯೇ ಮಾಡುತ್ತಿದ್ದೇವೆ. ಇದುವರೆಗೆ ರಕ್ಷಣೆಗೆ ನಮ್ಮಿಂದಾದ ಸಹಕಾರ ನೀಡುತ್ತಾ ಬಂದಿದ್ದೇವೆ. ಈ ಭಾಗದಲ್ಲಿ ಇದುವರೆಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಹೇಳಿದ್ದಾರೆ. ಮಂಗಳವಾರ ಸಾಮೂಹಿಕ ಪ್ರಾರ್ಥನೆ ಮಂಗಳೂರು ಉರ್ವ ಮಾರಿಯಮ್ಮ ದೇವಸ್ಥಾನ ದಲ್ಲಿ ಮೀನುಗಾರರು ಸಾಮೂಹಿಕ ಪ್ರಾರ್ಥನೆ ಮಾಡಲು ನಿರ್ಧರಿಸಿದ್ದಾರೆ.