Advertisement
ಬೆಳ್ತಂಗಡಿ ತಾ| ಆಸ್ಪತ್ರೆ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಅಧಿಕಾರಿ ಗಳೊಂದಿಗೆ ಅವರು ಸಭೆ ನಡೆಸಿ ತಾ| ನಲ್ಲಿರುವ ರೋಗಪೀಡಿತರ ಬಗ್ಗೆ, ರೋಗ ನಿವಾರಣೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು.
Related Articles
Advertisement
ತಾ|ನ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧಿಕಾರಿಗಳು ತಮ್ಮ ವ್ಯಾಪ್ತಿ ಯಲ್ಲಿ ಇರುವ ಡೆಂಗ್ಯೂ ರೋಗಿಗಳ ಬಗ್ಗೆ ಹಾಗೂ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡಿದರು. ಡೆಂಗ್ಯೂ ಜ್ವರಕ್ಕೆ ಕಾರಣವಾಗುವ ವಿಚಾರಗಳು, ಅದರ ನಿರ್ಮೂಲನೆಗೆ ತೆಗೆದುಕೊಳ್ಳ ಬೇಕಾದ ಕ್ರಮಗಳ ಕುರಿತು ಅಳದಂಗಡಿ ವೈದ್ಯಾಧಿ ಕಾರಿ ಡಾ| ಚೈತ್ರಾ ಮಾಹಿತಿ ನೀಡಿದರು. ತಾ| ವೈದ್ಯಾಧಿಕಾರಿ ಡಾ| ಕಲಾಮಧು ಹಾಗೂ ಬೆಳ್ತಂಗಡಿ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ವಿದ್ಯಾವತಿ ಪೂರಕ ಮಾಹಿತಿ ನೀಡಿದರು.
ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಾಜೇಶ್ ಶೆಟ್ಟಿ, ಸಿಡಿಪಿಒ ಪ್ರಿಯಾ ಆಗ್ನೆಸ್, ಉಪತಹಶೀಲ್ದಾರ್ ಶಂಕರ್, ತಾ.ಪಂ. ಮ್ಯಾನೇಜರ್ ಸುವರ್ಣ ಹೆಗ್ಡೆ ಉಪಸ್ಥಿತರಿದ್ದರು.
ಔಷಧ ಕೊರತೆ ನೀಗಿಸಲು ಸೂಚನೆ
ಔಷಧ ಕೊರತೆಯಿಂದ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಔಷಧಕ್ಕೆ ಮೆಡಿಕಲ್ಗಳಿಗೆ ಬರೆದು ಕೊಡುವ ವಿಚಾರವಾಗಿ ಶಾಸಕ ಪೂಂಜ ಕಟ್ಟುನಿಟ್ಟಿನ ಸೂಚನೆ ನೀಡಿ, ಔಷಧ ಸಂಗ್ರಹಿಸಿಟ್ಟು, ಕೊರತೆ ಬಂದರೆ ಕೂಡಲೇ ಮಾಹಿತಿ ನೀಡಬೇಕು. ಆರೋಗ್ಯ ರಕ್ಷಾ ಸಮಿತಿ ಅನುದಾನದಿಂದ ಔಷಧ ತರಿಸಿಕೊಳ್ಳಿ ಎಂದು ತಿಳಿಸಿದರು.
ಲ್ಯಾಬ್ ಟೆಕ್ನೀಶಿಯನ್ ನೇಮಕ
ತಾ|ನಲ್ಲಿ ಲ್ಯಾಬ್ ಟೆಕ್ನೀಶಿಯನ್ಗಳ ಕೊರತೆಯಿರುವ ವಿಚಾರ ಶಾಸಕರ ಗಮನಕ್ಕೆ ತಂದಾಗ, ಪ್ರಸಕ್ತ ಇರುವವರ ಕಾರ್ಯನಿರ್ವಹಣೆ ಸಹಿತ ಅವಶ್ಯ ಇರುವ ಸ್ಥಳಗಳ ಕುರಿತು ಮಾಹಿತಿ ಪಡೆದರು. 13 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎರಡು ದಿನಗಳಿಗೊಮ್ಮೆ ತೆರಳುವುದರಿಂದ ಕೆಲವು ಕೇಂದ್ರಗಳಿಗೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಒಬ್ಬರನ್ನು ನೇಮಿಸುವಂತೆ ಸೂಚಿಸಿದರು. ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆಯಿರುವ ಬಗ್ಗೆ ಗಮನ ಸೆಳೆದಾಗ, ಕೊರತೆ ಪಟ್ಟಿ ತಯಾರಿಸಿ ಸರಕಾರದ ಗಮನಸೆಳೆದು ಅಗತ್ಯ ನೇಮಕಾತಿಗಳಿಗೆ ಕ್ರಮ ಕೈಗೊಳ್ಳುತ್ತೇನೆ