Advertisement

ದೇಶಾದ್ಯಂತ ಪ್ರಜಾಪ್ರಭುತ್ವದ ಹೈಜಾಕ್‌: ಅಸ್‌ಹರ್‌ ವಜಾಹತ್‌

01:15 AM Apr 30, 2019 | sudhir |

ಕುಂಬಳೆ: ದೇಶಾದ್ಯಂತ ಪ್ರಜಾಪ್ರಭುತ್ವದ ಹೈಜಾಕ್‌ ಆಗಿರುವಂತಹ ಸ್ಥಿತಿ ನಿರ್ಮಾಣವಾಗಿದೆ.ಅನೇಕತೆಯಲ್ಲಿ ಏಕತೆ ಎಂಬ ಭಾರತೀಯ ಚಿಂತನೆಗೆ ವಿರುದ್ಧವಾಗಿ ಚಿಂತನೆ ದೇಶದಲ್ಲಿ ನಡೆಯುತ್ತಿರುವುದಾಗಿ ಪ್ರಮುಖ ಹಿಂದಿ ಸಾಹಿತಿ ಅಸ್‌ಹರ್‌ ವಜಾಹತ್‌ ಹೇಳಿದರು.

Advertisement

ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ ಕಾಸರಗೋಡು ಪೆರಿಯದಲ್ಲಿ ಹಿಂದಿ ವಿಭಾಗದ ವತಿಯಿಂದ ನಡೆದ ವರ್ತಮಾನ ಕಾಲ ಮತ್ತು ಬರಹ ಗಾರರು ಎಂಬ ಕುರಿತು ಜರಗಿದ ಏಕದಿನ ಕಾರ್ಯಾ ಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವವೆಂಬುದು ಹಲವು ಬಾಹ್ಯ ಶಕ್ತಿಗಳಿಂದ ಹೈಜಾಕ್‌ ಆಗಿರುವುದಾಗಿ ಅಭಿಪ್ರಾಯಪಟ್ಟರು. ವಿವಿಧ ಜಾತಿಮತ ಚಿಂತನೆಗಳನ್ನೊಳಗೊಂಡ ಭಾರತೀಯ ಸಂಸ್ಕೃತಿ ಮಾನವರೆಲ್ಲರನ್ನೂ ಒಂದಾಗಿ ಕಾಣುವ ಸಂಸ್ಕೃತಿಯಾಗಿರುವುದಾಗಿ ಹೇಳಿದರು. ಎಲ್ಲ ಧರ್ಮಗಳ‌ನ್ನು ಒಂದಾಗಿ ಕಾಣುವುದು ಮತ್ತು ಗೌರವಿಸುವುದು ಸಾಹಿತಿಗಳ ಧರ್ಮವೆಂದರು. ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪ್ರಮುಖರಾದ ಡಾ| ಸುಧಾ ಬಾಲಕೃಷ್ಣನ್‌, ಡಾ| ಸುಪ್ರಿಯಾ, ಡಾ| ತಾರು ಎಸ್‌. ಪವಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next