Advertisement

ಕಿಮ್ಸ್‌ ನಿರ್ದೇಶಕರ ವರ್ಗಾವಣೆಗೆ ಆಗ್ರಹ

03:17 PM Oct 01, 2019 | Team Udayavani |

ಕಾರವಾರ: ನಾಲ್ಕಕ್ಕೂ ಅಧಿಕ ವರ್ಷಗಳಿಂದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ| ಶಿವಾನಂದ ದೊಡ್ಮನಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ದೇಶಕರಾಗಿ ಒಬ್ಬರೇ ನಾಲ್ಕು ವರ್ಷಗಳಿಗಿಂತ ಅಧಿಕ ಸಮಯ ಅಧಿಕಾರದಲ್ಲಿ ಇರಲು ನಿಯಮದಲ್ಲಿ ಅವಕಾಶವಿಲ್ಲ. ಅವರ ವಿರುದ್ಧ ಹಲವು ಆರೋಪಗಳು ಕೇಳಿಬಂದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಈ ಹಿಂದೆ ಸಮ್ಮಿಶ್ರ ಸರ್ಕಾರ ಅಧಿಕಾರಲ್ಲಿದ್ದಾಗ ಅಂದಿನ ಸಚಿವ ತುಕಾರಾಂ ಅವರಿಗೂ ಈ ನಿಟ್ಟಿನಲ್ಲಿ ಮನವಿ ನೀಡಲಾಗಿತ್ತು. ಜೂನ್‌ 28ಕ್ಕೆ ಮತ್ತೂಮ್ಮೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಗ ಸರ್ಕಾರ ಬದಲಾದರೂ ಕಾಲೇಜಿನ ನಿರ್ದೇಶಕರ ಬದಲಾವಣೆ ಆಗಿಲ್ಲ.

ಹಾಗಾಗಿ ಸರ್ಕಾರಕ್ಕೆ ಅವರ ಅನಿವಾರ್ಯತೆ ಇದೆಯೇ? ಈ ಹುದ್ದೆಗೆ ಸೂಕ್ತವಾದವರು ರಾಜ್ಯದಲ್ಲಿ ಬೇರೆ ಯಾರೂ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಹೇಳಿದರು. ನಿರ್ದೇಶಕರ ಹುದ್ದೆಗೆ ಈಗಾಗಲೇ ಮೂರು ಸಲ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಹಲವರು ಅರ್ಜಿ ಸಲ್ಲಿಸಿದರೂ ಅಭ್ಯರ್ಥಿಗಳ ಸಂದರ್ಶನ ಮಾತ್ರ ನಡೆಯುತ್ತಿಲ್ಲ. ಹಲವು ವೈದ್ಯರು ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಖಾಲಿ ಹುದ್ದೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತಿಲ್ಲ. ಹೊಸಬರು ಬಂದರೂ ಹೆಚ್ಚು ದಿನ ಇರುವುದಿಲ್ಲ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಇಮಿ¤ಯಾಜ್‌, ಸಿ.ಎನ್‌. ನಾಯ್ಕ, ಅಲ್ತಾಫ್‌ ಶೇಖ್‌, ರಾಜೀವ ನಾಯ್ಕ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next