Advertisement

ರಸ್ತೆಗಳ ದುರಸ್ತಿಗೆ ಆಗ್ರಹ

12:36 PM Nov 05, 2019 | Team Udayavani |

ಹೊನ್ನಾಳಿ: ಈಚೆಗೆ ಸುರಿದ ಮಳೆಗೆ ಪಟ್ಟಣದ ಬಹುತೇಕ ರಸ್ತೆಗಳು ಗುಂಡಿ ಬಿದ್ದು ಜನರು ಸಂಚರಿಸುವುದೇ ದುಸ್ತರವಾಗಿದೆ. ಕೆಲ ಬಡಾವಣೆಗಳ ಕಳಪೆ ಸಿಮೆಂಟ್‌ ರಸ್ತೆ ಕಾಮಗಾರಿಯಿಂದ ಸಿಮೆಂಟ್‌ ಕಿತ್ತು ಹೋಗಿ ಕಬ್ಬಿಣದ ಸರಳುಗಳು ಮೇಲೆ ಬಂದಿದ್ದರೆ, ಡಾಂಬರ್‌ ರಸ್ತೆಗಳಲ್ಲಿ ಡಾಂಬರ್‌ ಕಿತ್ತು, 2-3 ಅಡಿ ಆಳದ ಗುಂಡಿಗಳಾಗಿವೆ.

Advertisement

ಒಳಚರಂಡಿ ಕಾಮಗಾರಿ ಮಾಡುವ ಉದ್ದೇಶದಿಂದ ಸುಮಾರು 10 ವರ್ಷಗಳ ಹಿಂದೆ ರಸ್ತೆ ಮಧ್ಯದಲ್ಲಿ 4ರಿಂದ 5 ಅಡಿ ಆಳ ಗುಂಡಿ ತೋಡಿ ಮ್ಯಾನ್‌ಹೋಲ್‌ ನಿರ್ಮಿಸಲಾಗಿತ್ತು. ಒಳ ಚರಂಡಿ ಕಾಮಗಾರಿ ಅಪೂರ್ಣವಾಗಿ ನಿಲುಗಡೆಯಾದ ಕಾರಣ ಅಲ್ಲಲ್ಲಿ ಮ್ಯಾನ್‌ಹೋಲ್‌ಗ‌ಳು ಬಾಯಿ ತೆರೆದುಕೊಂಡು ಅಪಘಾತಕ್ಕೆ ಆಹ್ವಾನ ನೀಡಿ ಸಂಚಾರಕ್ಕೆ ಮತ್ತಷ್ಟೂ ಅಡ್ಡಿ ಮಾಡಿವೆ. ರಾತ್ರಿ ಹೊತ್ತಿನಲ್ಲಿ ರಸ್ತೆಗಳಲ್ಲಿ ಸಂಚರಿಸುವುದು ದೊಡ್ಡ ಸಮಸ್ಯಯಾಗಿದೆ. ವಿದ್ಯುತ್‌ ನಿಲುಗಡೆಯಾದ ಸಂದರ್ಭದಲ್ಲಿ ಅವಘಡಗಳೂ ಜರುಗಿವೆ. ತಕ್ಷಣ ರಸ್ತೆ ದುರಸ್ತಿ ಮಾಡುವುದಲ್ಲದೇ ಒಳಚರಂಡಿ ಕಾಮಗಾರಿಗೆ ನಿರ್ಮಿಸಿರುವ ಎಲ್ಲಾ ಮ್ಯಾನ್‌ಹೋಲ್‌ಗ‌ಳನ್ನು ಮುಚ್ಚಬೇಕು ಎಂದು ಪಟ್ಟಣದ ಜನ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next