Advertisement

ಪಾಕ್‌ ಪ್ರಧಾನಿ ಮಾಡಿ ಅಂತ ಆಗ್ರಹಿಸಿ ಟವರ್‌ ಏರಿದ

02:33 PM Dec 23, 2018 | |

ಹಾವೇರಿ ಜಿಲ್ಲೆಯಲ್ಲಿ ಮಾತೆತ್ತಿದರೆ ಮರ, ಮೊಬೈಲ್‌ ಟವರ್‌ ಏರಿ ಪ್ರತಿಭಟಿಸುವ ವಿಚಿತ್ರ ಚಟ ಹೊಂದಿರುವ ಸಿಂಗ್ಲಿ ಬಸ್ಯಾ ಎಂಬ ಯುವಕನ ಹೆಸರನ್ನು ಅನೇಕರು ಕೇಳಿರಬಹುದು. ತನ್ನ ಮನೆಯ ವ್ಯಾಜ್ಯವಿರಲಿ, ರೈತರ ಸಮಸ್ಯೆಯಿರಲಿ ಮರ, ಟವರ್‌ ಏರಿ ಕುಳಿತು ಈತ ಆಗಾಗ ಸುದ್ದಿಯಾಗುತ್ತಿರುತ್ತಾನೆ.

Advertisement

ಇದೇ ಸಿಂಗ್ಲಿ ಬಸ್ಯನ ಅಣ್ತಮ್ಮ ಎನ್ನಬಹುದಾದ ವ್ಯಕ್ತಿಯೊಬ್ಬ ಪಾಕಿಸ್ಥಾನದಲ್ಲಿ ಶನಿವಾರ ಇಂಥದ್ದೇ ರಾದ್ಧಾಂತ ಸೃಷ್ಟಿಸಿದ್ದಾನೆ. ಪಾಕಿಸ್ಥಾನದ ಸರ್ಗೋದಾ ಪ್ರಾಂತ್ಯದವನಾದ ಈತ ಶನಿವಾರ ಮಧ್ಯಾಹ್ನ ಇಸ್ಲಾಮಾಬಾದ್‌ನ ಬ್ಲೂ ಏರಿಯಾದಲ್ಲಿರುವ ಮೊಬೈಲ್‌ ಟವರೊಂದನ್ನು ಹತ್ತಿ ಕುಳಿತು, ನನ್ನಲ್ಲಿ ಪಾಕಿಸ್ಥಾನದ ಆರ್ಥಿಕತೆ ಸುಧಾರಿಸುವ ಹೊಸ ಐಡಿಯಾಗಳಿವೆ. ಹಾಗಾಗಿ, ಕೂಡಲೇ ನನ್ನನ್ನು ಪಾಕಿಸ್ಥಾನದ ಪ್ರಧಾನಿ ಎಂದು ಘೋಷಿಸಬೇಕು ಅಥವಾ ಪ್ರಧಾನಿ ಇಮ್ರಾನ್‌ ಖಾನ್‌ ನನ್ನೊಂದಿಗೆ ಮಾತನಾಡಬೇಕು ಎಂದು ಪಟ್ಟು ಹಿಡಿಯಲಾರಂಭಿಸಿದ. ಕೊನೆಗೆ ಪೊಲೀಸರು ಮಿಮಿಕ್ರಿ ಕಲಾವಿದನ ಮೂಲಕ ಇಮ್ರಾನ್‌ ಖಾನ್‌ ಧ್ವನಿಯಲ್ಲಿ ಮಾತನಾಡಿಸಿದ್ದೂ ಆಯಿತು. ಆದ್ರೂ, ಆತ ಇಳಿಯಲು ಒಪ್ಪದಿದ್ದಾಗ ಸುಸ್ತಾದ ಪೊಲೀಸರು, ಕೊನೆಗೆ ಕ್ರೇನ್‌ ಬಳಸಿ ಈತನನ್ನು ಕೆಳಗಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next