Advertisement

ಕುಡುಕ ಗಂಡನನ್ನು ವಿಷಯಿಕ್ಕಿ ಸಾಯಿಸಿದ ಪತ್ನಿ, ಮಂತ್ರವಾದಿ ಸೆರೆ

04:10 PM Mar 05, 2018 | Team Udayavani |

ಹೊಸದಿಲ್ಲಿ : ಮಂತ್ರವಾದಿಯ ಸಲಹೆ ಕೇಳಿ ಕುಡುಕ ಗಂಡನನ್ನು ವಿಷಯಿಕ್ಕಿ ಸಾಯಿಸಿದ ಮಹಿಳೆಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. 

Advertisement

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮುಖ್ಯ ಆರೋಪಿಯಾದ K V ರಾಮ ಮತ್ತು ಮಂತ್ರವಾದಿ ಶ್ಯಾಮ್‌ ಸಿಂಗ್‌ ಅಲಿಯಾಸ್‌ ಭಗತ್‌ ಸಿಂಗ್‌ನನ್ನು ಕೂಡ ಬಂಧಿಸಿದ್ದಾರೆ. 

ಪತ್ನಿ ಗೈದ ವಿಷಪ್ರಾಶನದಿಂದ ಮೃತಪಟ್ಟ ಪತಿಯನ್ನು ಡಿ ಶ್ರೀನಿವಾಸ ಮೂರ್ತಿ ಎಂದು ಗುರುತಿಸಲಾಗಿದೆ. ಕಳೆದ ಫೆ.26ರಂದು ಈತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ರಾಮ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ತರಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಆತ ಮೃತಪಟ್ಟಿದ್ದ; ಆಸ್ಪತ್ರೆಯವರು ಪೊಲೀಸರಿಗೆ ಈತನ ಅಸಹಜ ಸಾವಿನ ಬಗ್ಗೆ ದೂರು ನೀಡಿದ್ದರು. 

ಸುದ್ದಿ ತಿಳಿದು ಆಂಧ್ರ ಪ್ರದೇಶದಿಂದ ಧಾವಿಸಿ ಬಂದಿದ್ದ ಮೃತನ ಸಹೋದರ ಪೊಲೀಸರಲ್ಲಿ ಎಫ್ಐಆರ್‌ ದಾಖಲಿಸಿದ್ದ. ಮೃತ ವ್ಯಕ್ತಿ ಶ್ರೀನಿವಾಸ ಮೂರ್ತಿ ಹಣಕಾಸು ಸಂಸ್ಥೆಯೊಂದರಲ್ಲಿ ಮ್ಯಾನೇಜರ್‌ ಆಗಿದ್ದ. ಆತನ ಪತ್ನಿಗೆ ಸರಕಾರಿ ಉದ್ಯೋಗ ಇದೆ. ಪತಿಯು ಕುಡಕನಾಗಿದ್ದುದರಿಂದ ಇವರ ದಾಂಪತ್ಯ ಸರಿ ಇರಲಿಲ್ಲ. 

ಪತಿಗೆ ವಿಷ ಉಣಿಸಿ ಸಾಯಿಸಿರುವುದನ್ನು ಒಪ್ಪಿಕೊಂಡಿರುವ ಮಹಿಳೆಯು, ತಮ್ಮ ಕುಟುಂಬಕ್ಕೆ 10ರಿಂದ 12 ಲಕ್ಷ ರೂ. ಸಾಲ ಇದೆ ಎಂಬುದನ್ನೂ ಹೇಳಿದ್ದಾಳೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next