Advertisement

ಸಾಧ್ವಿ ಆಶೀರ್ವಾದಕ್ಕೆ ವರ್ಗಾವಣೆ ಶಿಕ್ಷೆ

06:00 AM Jul 25, 2018 | Team Udayavani |

ಹೊಸದಿಲ್ಲಿ: ಕರ್ತವ್ಯದಲ್ಲಿದ್ದಾಗಲೇ ನಮಿತಾ ಆಚಾರ್ಯ ಎಂಬ ಸ್ವಯಂಘೋಷಿತ ಸಾಧ್ವಿಯ ಆಶೀರ್ವಾದ ಪಡೆದ ಕಾರಣಕ್ಕಾಗಿ ಪಶ್ಚಿಮ ದೆಹಲಿಯ ಜನಕಪುರಿ ಪೊಲೀಸ್‌ಠಾಣೆಯ ಅಧಿಕಾರಿ ಇಂದ್ರಪಾಲ್‌ ಅವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಸಮವಸ್ತ್ರ ಧರಿಸಿರುವ ಇಂದ್ರಪಾಲ್‌ ಅವರು, ಕುರ್ಚಿಯ ಮೇಲೆ ಧ್ಯಾನಸ್ಥರಾಗಿ ಕುಳಿತಿದ್ದು, ನಮಿತಾ ಆಚಾರ್ಯ ಅವರು ಕುರ್ಚಿಯ ಹಿಂದೆ ನಿಂತು ಇಂದ್ರಪಾಲ್‌ ತಲೆಯ ಮೇಲೆ ಕೈಯ್ಯಿಟ್ಟು ಆಶೀರ್ವದಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಇಂದ್ರಪಾಲ್‌ ವರ್ಗಾವಣೆಗೆ ಮೂಲ ಕಾರಣ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂದ್ರಪಾಲ್‌ ಕುಟುಂಬ ಸದಸ್ಯರು, ಮಾನಸಿಕ ಒತ್ತಡ ನಿವಾರಣೆಗಾಗಿ ಇಂದ್ರಪಾಲ್‌, ಧ್ಯಾನ ಹಾಗೂ ಆಶೀರ್ವಾದದ ಮೊರೆ ಹೋಗಿದ್ದರೆಂದು ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next