Advertisement

ದಿಲ್ಲಿ : ಶಂಕಿತ ಕ್ರಿಮಿನಲ್‌ ನಡೆಸಿದ ಮಾರಾಣಾಂತಿಕ ಹಲ್ಲೆಗೆ ಎಸ್‌ಐ ಸಾವು

09:21 AM May 22, 2019 | Sathish malya |

ಹೊಸದಿಲ್ಲಿ : ಇಲ್ಲಿನ ಶಹದಾರಾ ವಿವೇಕ್‌ ವಿಹಾರ್‌ ನಲ್ಲಿ ಮೊನ್ನೆ ಭಾನುವಾರ ದಿಲ್ಲಿ ಪೊಲೀಸ್‌ ಎಸ್‌ಐ ರಾಜ್‌ಕುಮಾರ್‌ ಎಂಬವರ ಮೇಲೆ ಶಂಕಿತ ಕ್ರಿಮಿನಲ್‌ ಓರ್ವ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಎಸ್‌ಐ ಸಾವಪ್ಪಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಮನೋಜ್‌ ತಿವಾರಿ ಆಗ್ರಹಿಸಿದ್ದಾರೆ.

Advertisement

ಎಸ್‌ಐ ರಾಜ್‌ ಕುಮಾರ್‌ ಅವರು ಶಂಕಿತ ಕ್ರಿಮಿನಲ್‌ನ ಚಲನ ವಲನವನ್ನು ತಮ್ಮ ಫೋನಿನಲ್ಲಿ ವಿಡಿಯೋ ಮಾಡುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಯಿತು. ಪರಿಣಾಮವಾಗಿ ಎಸ್‌ಐ ಅನಂತರ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಗರಿಕ ಸಮಾಜದಲ್ಲಿ ಗೂಂಡಾಗಿರಿಗೆ ಮತ್ತು ನಗರ ನಕ್ಸಲಿಸಂ ಗೆ ಅವಕಾಶ ಇಲ್ಲ; ಎಸ್‌ ಐ ಸಾವಿನ ಬಗ್ಗೆ ಸರಿಯಾದ ತನಿಖೆ ಆಗಲೇಬೇಕು ಎಂದು ತಿವಾರಿ ಟ್ವಿಟರ್‌ ನಲ್ಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next