Advertisement

Delhi; ನೀರಿಗೆ ಆಗ್ರಹಿಸುತ್ತಿದ್ದವರ ಮೇಲೆ ಜಲಫಿರಂಗಿ ಬಳಿಸಿದ ಪೊಲೀಸ್‌

01:02 AM Jun 23, 2024 | Team Udayavani |

ಹೊಸದಿಲ್ಲಿ: ದಿಲ್ಲಿಯಲ್ಲಿ ನೀರಿಗಾಗಿ ಸರಕಾರದ ವಿರುದ್ಧ ಜನ ಪ್ರತಿಭಟನೆ ನಡೆಸುತ್ತಿದ್ದು ಇದನ್ನು ಹತ್ತಿಕ್ಕಲು ಪೊಲೀಸರು ನೀರನ್ನೇ ಬಳಸಿರುವುದು ವಿಪರ್ಯಾಸ. ಓಖ್ಲದಲ್ಲಿರುವ ಜಲಮಂಡಳಿ ಎದುರು ಬಿಜೆಪಿ ನಾಯಕ ರಮೇಶ್‌ ಬಿಧುರಿ ನೇತೃ ತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಇವರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಗಳನ್ನು ಬಳಸಿದ್ದಾರೆ. ಈ ಸಂಬಂಧ ಫೋಟೋ, ವೀಡಿಯೋಗಳು ವೈರಲ್‌ ಆಗಿದ್ದು, ನೆಟ್ಟಿಗರು ಈ ಬಗ್ಗೆ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇದನ್ನು ಆಮ್‌ ಆದ್ಮಿ ರಾಜಕೀಯ ನಾಟಕ ಎಂದು ಟೀಕಿಸಿದೆ. ಈ ಮಧ್ಯೆ, ದಿಲ್ಲಿ ಸಚಿವೆ ಆತಿಶಿ ನಡೆಸುತ್ತಿರುವ ಪ್ರತಿಭಟನೆಯನ್ನು ಹಳಿ ತಪ್ಪಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದೂ ಆಪ್‌ ಆರೋಪಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next