Advertisement

ಇ.ಡಿ.ಗೆ ಮೊಬೈಲ್‌ ಹಸ್ತಾಂತರಿಸಿದ ಬಿಆರ್‌ಎಸ್‌ ಎಂಎಲ್‌ಸಿ ಕವಿತಾ

09:58 PM Mar 21, 2023 | Team Udayavani |

ನವದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಬಿಆರ್‌ಎಸ್‌ ಎಂಎಲ್‌ಸಿ ಕೆ.ಕವಿತಾ ಅವರು ತಮ್ಮ ಮೊಬೈಲ್‌ಗ‌ಳನ್ನು ಜಾರಿ ನಿರ್ದೇಶನಾಲಯ (ಇ.ಡಿ)ಕ್ಕೆ ಮಂಗಳವಾರ ಹಸ್ತಾಂತರಿಸಿದ್ದಾರೆ.

Advertisement

ಈ ಬಗ್ಗೆ ಅವರು ತನಿಖಾ ಸಂಸ್ಥೆಗೆ ಪತ್ರ ಬರೆದು ತಿಳಿಸಿರುವುದಾಗಿ ನವದೆಹಲಿಯಲ್ಲಿ ತಿಳಿಸಿದ್ದಾರೆ. ಮಹಿಳೆಯ ಗೌಪ್ಯತೆಯ ಹಕ್ಕು ಮೀರಿ ಯಾವುದೇ ಪೂರ್ವಾಗ್ರಹವಿಲ್ಲದೇ ನನ್ನ ಮೊಬೈಲ್‌ ಫೋನ್‌ಗಳನ್ನು ಇಡಿ ಗೆ ಸಲ್ಲಿಸಲಾಗುತ್ತಿದೆ,’ ಎಂದು ಹೇಳಿದರು.

ಕೆ.ಕವಿತಾ ಅವರು ಎರಡು ಮೊಬೈಲ್‌ ನಂಬರ್‌ಗಳನ್ನು ಬಳಸುತ್ತಿದ್ದು, ಇದರ ಐಎಂಇಐ ಹತ್ತು ಬಾರಿ ಬದಲಾವಣೆ ಆಗಿದೆ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ಇಡಿ ಆರೋಪಿಸಿತ್ತು.

ಈ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ಪುತ್ರಿ ಈ ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಮಂಗಳವಾರ ಕೂಡ ದೆಹಲಿ ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಿಸಿದಂತೆ ಇ.ಡಿ. ಕೆ.ಕವಿತಾ ಅವರನ್ನು ಬೆಳಗ್ಗೆ 11.30ರಿಂದ ಎಂಟೂವರೆ ಗಂಟೆಗಳ ಕಾಲ ವಿಚಾರೆಣೆ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next