Advertisement

ಮುಖ್ಯಮಂತ್ರಿ  ಕುಮಾರಸ್ವಾಮಿಗೆ ದೆಹಲಿ ಕರ್ನಾಟಕ ಸಂಘದಿಂದ ಅಭಿನಂದನೆ

02:22 PM Jun 20, 2018 | |

ಮುಂಬಯಿ: ಕರ್ನಾಟಕ ನೂತನ ಮುಖ್ಯಮಂತ್ರಿ  ಎಚ್‌. ಡಿ. ಕುಮಾರ ಸ್ವಾಮಿ ಅವರನ್ನು ದೆಹಲಿ ಕರ್ನಾಟಕ ಸಂಘದ ವತಿಯಿಂದ ಅಧ್ಯಕ್ಷ  ವಸಂತ ಶೆಟ್ಟಿ ಬೆಳ್ಳಾರೆಯವರ ನೇತೃತ್ವದಲ್ಲಿ ಪದಾಧಿಕಾರಿಗಳೊಂದಿಗೆ ಜೂ.  17 ರಂದು  ದೆಹಲಿಯ ಕರ್ನಾ ಟಕ ಭವನದಲ್ಲಿ ಭೇಟಿ ಮಾಡಿ ಅಭಿನಂದಿಸಲಾಯಿತು.

Advertisement

ದೆಹಲಿ ಕರ್ನಾಟಕ ಸಂಘ ನಡೆದು ಬಂದ ದಾರಿ ಮತ್ತು ಈವರೆಗೆ ಹಮ್ಮಿಕೊಂಡಿರುವ ಕಾರ್ಯ ಕ್ರಮಗಳು ಮತ್ತು ಮುಂಬರುವ ಸಂಘದ ಯೋಜನೆಗಳನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರಿಗೆ ವಿವರಿಸ ಲಾಯಿತು. ಸಂಘವು ರಾಜಧಾನಿಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು ತಮ್ಮ ಎಲ್ಲಾ ನಾಡುನುಡಿಯನ್ನು ಬಿಂಬಿರುವ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಿಎಂ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಜಂಟಿ ಕಾರ್ಯದರ್ಶಿಗಳಾದ  ಟಿ.ಪಿ. ಬೆಳ್ಳಿಯಪ್ಪ,  ಜಮುನಾ ಸಿ. ಮಠದ, ದೆಹಲಿ ಕನ್ನಡ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿಯತಿ ಸದಸ್ಯರುಗಳಾದ  ರಾಧಾಕೃಷ್ಣ, ಶಶಿಕಾಂತ ಪಾಟೀಲ್‌ ಮತ್ತು  ಸಂತೋಷ್‌ಜೆ. ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next