Advertisement

ಕನ್ಹಯ್ಯ ವಿರುದ್ಧ ಕಾನೂನು ಕ್ರಮ ಅನುಮತಿಗೆ ತಿಂಗಳ ಕಾಲಾವಕಾಶ ಕೋರಿದ ದಿಲ್ಲಿ ಸರಕಾರ

09:05 AM Apr 04, 2019 | Team Udayavani |

ಹೊಸದಿಲ್ಲಿ : 2016ರ ಜೆಎನ್‌ಯು ದೇಶದ್ರೋಹದ ಕೇಸಿನಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್‌ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಅನುಮತಿ ನೀಡುವುದಕ್ಕೆ ತನಗೆ ಒಂದು ತಿಂಗಳ ಕಾಲಾವಕಾಶ ನೀಡಬೇಕು ಎಂದು ದಿಲ್ಲಿ ಸರಕಾರ ಇಂದು ಇಲ್ಲಿನ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದೆ.

Advertisement

ಚೀಫ್ ಮಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ದೀಪಕ್‌ ಶೇರಾವತ್‌ ಅವರು ನಿರ್ದಿಷ್ಟ ಕಾಲಮಿತಿಯನ್ನು ಉಲ್ಲೇಖೀಸಿ ಸಮರ್ಪಕ ಉತ್ತರವನ್ನು ಸಲ್ಲಿಸುವಂತೆ ಆಪ್‌ ಸರಕಾರಕ್ಕೆ ನಿರ್ದೇಶ ನೀಡಿದರು.

ದಿಲ್ಲಿ ಸರಕಾರದ ಅನುಮತಿಯು ಕೇವಲ ಆಡಳಿತಾತ್ಮಕ ಸ್ವರೂಪದ್ದಾಗಿದ್ದು ಅದಿಲ್ಲದೆಯೇ ಚಾರ್ಜ್‌ ಶೀಟ್‌ ಸಲ್ಲಿಸುವುದಕ್ಕೆ ತನಗೆ ಕಾನೂನಿನಲ್ಲಿ ಅವಕಾಶವಿದೆ ಎಂದು ಡಿಲ್ಲಿ ಪೊಲೀಸ್‌ನ ವಿಶೇಷ ವಿಭಾಗದ ಡಿಸಿಪಿ ಪ್ರಮೋದ್‌ ಕುಶ್ವಾಹ ಅವರು ಈ ಮೊದಲು ಕೋರ್ಟಿಗೆ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next