Advertisement

ದೆಹಲಿ ರೈತರ ಹೋರಾಟ ಬೆಂಬಲಿಸಿ ನಿರಶನ

03:06 PM Feb 07, 2021 | Team Udayavani |

ಬೀದರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋ ಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಶನಿವಾರ ಅಖೀಲ ಭಾರತ ಕಿಸಾನ್‌ ಸಭಾ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ದೆಹಲಿ ಹೋರಾಟಕ್ಕೆ ಬೆಂಬಲಿಸಿ ರೈತ ಸಂಘಟನೆಗಳ ಒಕ್ಕೂಟದಿಂದ ರಾಜ್ಯ-ರಾಷ್ಟ್ರೀಯ ಹೆದ್ದಾರಿ ಬಂದ್‌ ರಾಷ್ಟ್ರವ್ಯಾಪ್ತಿ ಚಳವಳಿಗೆ ಕರೆ ನೀಡಲಾಗಿತ್ತು. ಆದರೆ, ಬೀದರನಲ್ಲಿ ಕೇವಲ ಪ್ರತಿಭಟನಾ ರ್ಯಾಲಿಗೆ ಮಾತ್ರ ಸೀಮಿತವಾಗಿತ್ತು. ಕಿಸಾನ್‌ ಸಭಾ ರಾಜ್ಯ ಉಪಾಧ್ಯಕ್ಷ ಬಾಬುರಾವ ಹೊನ್ನಾ ನೇತೃತ್ವದಲ್ಲಿ ರ್ಯಾಲಿ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತದ ಅಧಿ ಕಾರಿಗೆ ಸಲ್ಲಿಸಲಾಯಿತು.

ಇದನ್ನೂ ಓದಿ:ಮೀರಾ ವಿರುದ್ಧ ದಲಿತ ಸಂಘಟನೆಗಳ ಕಿಡಿ

ಪ್ರತಿಭಟನೆಯಲ್ಲಿ ಪ್ರಮುಖರಾದ ಎಂಡಿ ಖಮರ ಪಟೇಲ್‌, ನಜೀರ್‌ ಅಹ್ಮದ್‌, ಬಸವರಾಜ ಪಾಟೀಲ, ಗುರುಪಾದಯ್ಯ ಸವಾಮಿ, ಮಚ್ಛೇಂದ್ರ, ಪ್ರಭು ತಗಣಿಕರ, ಖದೀರ ಸಾಬ್‌, ಶಫಾಯತ್‌ ಅಲಿ, ಅಹ್ಮದ್‌ ಜಂಬಗಿ, ಸುನೀಲ ವಮಾ, ಪಪ್ಪುರಾಜ ಮೇತ್ರೆ, ಇಮ್ಯಾನವೆಲ್‌ ಗಾದಗಿ, ರಾಮಣ್ಣ ಅಲಮಸಪೂರ, ಚಂದ್ರಬಾಹನ, ಬಸವರಾಜ ಹೊನ್ನಿಕೇರಿ, ಶಿವರಾಜ ಹೊನ್ನಿಕೇರಿ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next