Advertisement

ದಿಲ್ಲಿ ಎನ್‌ಕೌಂಟರ್‌: 4 ಸಾವು

06:00 AM Jun 10, 2018 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಮಧ್ಯಾಹ್ನ ನಡೆದ ಎನ್‌ಕೌಂಟರ್‌ವೊಂದರಲ್ಲಿ ವಾಂಟೆಡ್‌ ಕ್ರಿಮಿನಲ್‌ ರಾಜೇಶ್‌ ಭಾರ್ತಿ ಸೇರಿದಂತೆ ನಾಲ್ವರನ್ನು ಹತ್ಯೆಗೈಯ್ಯಲಾಗಿದೆ. ದೆಹಲಿ ಪೊಲೀಸರ ವಿಶೇಷ ಘಟಕವು ಈ ಎನ್‌ಕೌಂಟರ್‌ ನಡೆಸಿದೆ. ಕಾರ್ಯಾಚರಣೆಯಲ್ಲಿ 6 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

Advertisement

ಗ್ಯಾಂಗ್‌ ಸದಸ್ಯರು ಛತ್ತಾರ್‌ಪುರದ ತೋಟದ ಮನೆಯೊಂದಕ್ಕೆ ಆಗಾಗ್ಗೆ ಬರುತ್ತಿರುತ್ತಾರೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕಳೆದ 2ರಿಂದ 3 ತಿಂಗಳಿಂದಲೂ ಪೊಲೀಸರು ಈ ಮನೆಯ ಮೇಲೆ ಕಣ್ಣಿಟ್ಟಿದ್ದರು. ಮೃತರಲ್ಲಿ ಭಾರ್ತಿ ಮತ್ತು ವಿದ್ರೋಹ್‌ ಎಂಬುವವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next