Advertisement

ಪಟಾಕಿ ಸಿಡಿಸಿ ಗಾಯಗೊಳಿಸಿದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್

05:47 PM Nov 17, 2021 | Team Udayavani |

ನವದೆಹಲಿ: ಪಟಾಕಿ ಸಿಡಿಸುವಾಗ ನಿರ್ಲಕ್ಷ್ಯ ತೋರಿ, ಓರ್ವ ವ್ಯಕ್ತಿಯ ಕಣ್ಣಿನ ದೃಷ್ಠಿ ಶಾಶ್ವತವಾಗಿ ಹೋಗಲು ಕಾರಣನಾಗಿದ್ದ ವ್ಯಕ್ತಿಗೆ ದೆಹಲಿ ನ್ಯಾಯಾಲಯ ಆರು ತಿಂಗಳುಗಳ ಜೈಲು ಶಿಕ್ಷೆ ವಿಧಿಸಿದೆ.

Advertisement

ದೆಹಲಿಯ ನವೀನ್‌ ಕುಮಾರ್‌ ಹೆಸರಿನ ವ್ಯಕ್ತಿ 2013ರಲ್ಲಿ ಬಾಟೆಲ್‌ ಒಂದರಲ್ಲಿ ರಾಕೆಟ್‌ ಪಟಾಕಿ ಇಟ್ಟು ಅದಕ್ಕೆ ಕಿಡಿ ಹತ್ತಿಸಿದ್ದ.

ನಂತರ ಆ ಬಾಟೆಲ್‌ನ್ನು ಕಾಲಿನಲ್ಲಿ ಒದ್ದಿದ್ದ. ಆ ರಾಕೆಟ್‌ ನೇರವಾಗಿ ವ್ಯಕ್ತಿಯೊಬ್ಬರ ಬಲಗಣ್ಣು ಹೊಕ್ಕಿದ್ದು, ಅವರು ಶಾಶ್ವತವಾಗಿ ದೃಷ್ಠಿ ಕಳೆದುಕೊಂಡಿದ್ದರು.

ಈ ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ನ್ಯಾಯಾಲಯ ಅಪರಾಧಿಗೆ ಆರು ತಿಂಗಳುಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಇದನ್ನೂ ಓದಿ:ಗೋವಾ ಟ್ಯಾಕ್ಸಿ ಚಾಲಕರಿಗೆ 4 ವಿಶೇಷ ಯೋಜನೆ ಘೋಷಿಸಿದ ಕೇಜ್ರಿವಾಲ್

Advertisement
Advertisement

Udayavani is now on Telegram. Click here to join our channel and stay updated with the latest news.

Next