Advertisement

ಸಿಯಾಚಿನ್‌ಗೆ ಭೇಟಿ ನೀಡಿದ ರಾಜ್‌ನಾಥ್‌

11:39 PM Jun 03, 2019 | mahesh |

ಹೊಸದಿಲ್ಲಿ: ರಕ್ಷಣಾ ಸಚಿವರಾಗಿ ನೇಮಕಗೊಳ್ಳುತ್ತಿದ್ದಂತೆಯೇ ರಾಜನಾಥ್‌ ಸಿಂಗ್‌ ಸಿಯಾಚಿನ್‌ಗೆ ಭೇಟಿ ನೀಡಿದ್ದಾರೆ. ವಿಶ್ವದ ಅತಿ ಎತ್ತರದ ರಣರಂಗ ಎಂದೇ ಹೆಸರಾದ ಸಿಯಾ ಚಿನ್‌ಗೆ ತೆರಳಿ ಅಲ್ಲಿ, ಯೋಧ ರೊಂದಿಗೆ ಜಿಲೇಬಿ ಸವಿದ ಫೋಟೋ ಹಾಗೂ ವಿಡಿಯೋವನ್ನು ಟ್ವಿಟರ್‌ನಲ್ಲಿ ಸಿಂಗ್‌ ಹಂಚಿಕೊಂಡಿದ್ದಾರೆ. ಇಲ್ಲಿ ಹುತಾತ್ಮರಾದ ಎಲ್ಲ ಯೋಧರಿಗೂ ಗೌರವ ನಮನವನ್ನು ಸಿಂಗ್‌ ಸಲ್ಲಿಸಿದ್ದಾರೆ. ಸಿಯಾಚಿನ್‌ನಲ್ಲಿ ಈವರೆಗೆ 1100 ಯೋಧರು ಹುತಾತ್ಮರಾಗಿದ್ದಾರೆ.

Advertisement

ಮೈನಸ್‌ 60 ಡಿಗ್ರಿವರೆಗೂ ತೆರಳುವ ತಾಪಮಾನದಿಂದ ರಕ್ಷಣೆಗೆ ಬಿಳಿ ಜಾಕೆಟ್‌ ತೊಟ್ಟು ತೆರಳಿದ್ದ ರಾಜ್‌ನಾಥ್‌ ಜೊತೆಗೆ, ಸೇನೆಯ ಹಿರಿಯ ಅಧಿಕಾರಿಗಳೂ ಇದ್ದರು. ಅನಂತರ ಸಂಜೆ ಶ್ರೀನಗರಕ್ಕೆ ಬಂದು ಅಲ್ಲಿ ಸೇನಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ರಕ್ಷಣಾ ಸಚಿವಾಲಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲ ಯೋಜನೆಗಳ ವಿವರಣೆಯನ್ನೂ ನೀಡುವಂತೆ ಅಧಿಕಾರಿಗಳಿಗೆ ಸಿಂಗ್‌ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next