Advertisement

Kasaragod ಸ್ಪರ್ಧೆಯಲ್ಲಿ ಸೋಲು; ಯುವಕನಿಗೆ ಇರಿತ

11:55 PM Jul 18, 2024 | Team Udayavani |

ಕಾಸರಗೋಡು: ಮುಷ್ಟಿ ಯುದ್ಧ ಸ್ಪರ್ಧೆಯಲ್ಲಿ ಸೋತ ದ್ವೇಷದಿಂದ ಯುವಕನಿಗೆ ಹಲ್ಲೆ ಮಾಡಿ ಇರಿದು ಗಾಯಗೊಳಿಸಿದ ಘಟನೆ ನಗರದಲ್ಲಿ ನಡೆದಿದೆ. ಈ ಬಗ್ಗೆ ತಳಂಗರೆ ನಿವಾಸಿಯಾಗಿರುವ 19ರ ಹರೆಯದ ಯುವಕ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ದೂರು ನೀಡಿದ ಯುವಕ ನಗರದ ಜಿಮ್ನೆàಶಿಯಂ ಒಂದರಲ್ಲಿ ಜುಲೈ 15ರಂದು ರಾತ್ರಿ ಇನ್ನೋರ್ವನೊಂದಿಗೆ ಸ್ಪರ್ಧೆ ಯಲ್ಲಿ ಏರ್ಪಟ್ಟಿದ್ದರು. ಅದರಲ್ಲಿ ಆ ಯುವಕ ಗೆದ್ದಿದ್ದು. ಆ ದ್ವೇಷದಿಂದ ಹಲ್ಲೆ ಮಾಡಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಬಾವಿಗೆ ಬಿದ್ದು ಮಹಿಳೆ ಸಾವು
ಕಾಸರಗೋಡು: ಅಣಂಗೂರು ನೆಲ್ಕಳ ನಿವಾಸಿ, ಪ್ರಸ್ತುತ ಮನ್ನಿಪ್ಪಾಡಿ ವಿವೇಕಾನಂದ ನಗರದಲ್ಲಿ ವಾಸಿಸುವ ಅಣಂಗೂರು ಜಿಎಲ್‌ಪಿಎಸ್‌ನ ನಿವತ್ತ ಮುಖ್ಯೋಪಾಧ್ಯಾಯ ಕುಂಞಿಕೃಷ್ಣ ಮಾಸ್ತರ್‌ ಅವರ ಪತ್ನಿ ಚಂದ್ರಾವತಿ (62) ಅವರು ಮನೆ ಬಳಿಯ ಬಾವಿಗೆ ಬಿದ್ದು ಸಾವಿಗೀಡಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next