Advertisement

ಕಾರ್ಕಳ ವೆಂಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ , ಅವಭ್ರಥೋತ್ಸವ ಕಾರ್ಯಕ್ರಮ

12:16 PM Dec 06, 2020 | Adarsha |

ಕಾರ್ಕಳ: ಪಡುತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರವಿವಾರ ದೀಪೋತ್ಸವ ನಡೆದು ಅವಭ್ರಥೋತ್ಸವ ನೆರವೇರಿತು.

Advertisement

ಪ್ರಾತ;ಕಾಲ ನೈರ್ಮಲ್ಯ ವಿಸರ್ಜನೆ ಬಳಿಕ ಆರಂಭಗೊಂಡು ಉಭಯ ದೇವರು ಬಂಗಾರದ ಪಲ್ಲಕ್ಕಿಯಲ್ಲಿ  ಅವಭ್ರತ ಸ್ನಾನಕ್ಕಾಗಿ ರಾಮಸಮುದ್ರಕ್ಕೆ ಉತ್ಸವದಲ್ಲಿ ತೆರಳಿತು. ಅಲ್ಲಿ ದೇವರ ಅವಭ್ರತ ಸ್ನಾನ ನೆರವೇರಿತು.

ಇದನ್ನೂ ಓದಿ:BARC ಉದ್ಯೋಗ ತ್ಯಜಿಸಿ ತರಕಾರಿ ವ್ಯಾಪಾರದಲ್ಲಿ ಬದುಕು ಕಟ್ಟಿಕೊಂಡ ಸಂಶೋಧಕ

ಆ ಬಳಿಕ ಅಲ್ಲಿಂದ ಹಿಂತಿರುಗಿ ದೇವರ ಪಲ್ಲಕ್ಕಿನ್ನು ಅನಂತಶಯನ ಪದ್ಮಾವತಿ ದೇವಸ್ಥಾನಕ್ಕೆ ತರಲಾಯಿತು. ನಂತರ ದೇವಾಲಯದಲ್ಲಿ ಆರತಿ ಬೆಳಗುವ ಮೂಲಕ ಪೂಜೆ ಸಲ್ಲಿಸಿದರು.

ದೇವರಿಗೆ ವೈದಿಕರಿಂದ ಓಕುಳಿ ಪ್ರೋಕ್ಷಣೆ ಹಾಗೂ ಇತ್ಯಾದಿ ವೈದಿಕ ಕಾರ್ಯಕ್ರಮಗಳು ನಡೆದವು. ಬಳಿಕ  ಉತ್ಸವ ಹಿಂತುರುಗುವಾಗ ಭಜನೆ ಕೀರ್ತನೆಗಳು ಹಮ್ಮಿಕೊಳ್ಳಲಾಗಿತ್ತು. ಈ ನಡುವೆ ದೇವರ ಉತ್ಸವ ತೆರಳುವ ರಸ್ತೆಯುದ್ದಕ್ಕೂ ಭಕ್ತರು ಆರತಿ ಬೆಳಗಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next