Advertisement

ರಾಜ್ಯಾದ್ಯಂತ ಕೋವಿಡ್‌ ಸೋಂಕಿನ ಪ್ರಮಾಣದಲ್ಲಿ ಇಳಿಕೆ

09:47 PM Jan 29, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶನಿವಾರ 33,337 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ವಿವಿಧ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ಆ ಮೂಲಕ ರಾಜ್ಯದ ಒಟ್ಟು ಸೋಂಕಿನ ಪಾಸಿಟಿವಿಟಿ ದರ ಶೇ.19.37ಗೆ ಇಳಿಕೆಯಾಗಿದೆ.

Advertisement

69,902ಮಂದಿ ಗುಣಮುಖರಾಗಿದ್ದಾರೆ. ಶನಿವಾರ 1.72ಲಕ್ಷ ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜ್ಯಾದ್ಯಂತ ಒಟ್ಟು 2.52ಲಕ್ಷ ಸಕ್ರಿಯ ಪ್ರಕರಣಗಳಿವೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕೋವಿಡ್‌ ಸೋಂಕಿತ 70 ಮಂದಿ ಮೃತಪಟ್ಟಿದ್ದು, ಮರಣ ಪ್ರಮಾಣ ಶೇ. 0.20ರಷ್ಟಿದೆ.

ಬೆಂಗಳೂರು ನಗರ 16586, ಮೈಸೂರು 2431,ಧಾರವಾಡ 1278, ತುಮಕೂರು 1192, ಹಾಸನ 1039, ಮಂಡ್ಯ 986, ಬೆಳಗಾವಿ 798, ಶಿವಮೊಗ್ಗ 674, ಉತ್ತರ ಕನ್ನಡ 665, ದಕ್ಷಿಣ ಕನ್ನಡ 627,ಬಳ್ಳಾರಿ 602, ಉಡುಪಿ 579, ಕಲಬುರಗಿ 577, ಚಾಮರಾಜನಗರ 573, ಕೋಲಾರ 567, ಕೊಡಗು 540, ಹಾವೇರಿ 460, ಬಾಗಲಕೋಟೆ 394, ಬೆಂಗಳೂರು ಗ್ರಾಮಾಂತರ 367,ಚಿತ್ರದುರ್ಗ 309, ಚಿಕ್ಕಬಳ್ಳಾಪುರ 307, ಚಿಕ್ಕಮಗಳೂರು 292, ಕೊಪ್ಪಳ 269, ರಾಮನಗರ 237, ದಾವಣಗೆರೆ 216, ಬೀದರ್‌ 209, ಗ‌ದಗ 171, ವಿಜಯಪುರ 139, ರಾಯಚೂರು 137, ಯಾದಗಿರಿ ಜಿಲ್ಲೆಯ 116 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

70 ಮರಣ ಪ್ರಕರಣ
ಬೆಂಗಳೂರು 13, ಮೈಸೂರು 9,ದ.ಕ., ಕಲಬುರಗಿ, ಉಡುಪಿ ಜಿಲ್ಲೆಯಲ್ಲಿ ತಲಾ 5, ತುಮಕೂರು, ಬಳ್ಳಾರಿ ತಲಾ 4, ಮಂಡ್ಯ, ರಾಮನಗರ, ಬಾಗಲಕೋಟೆಯಲ್ಲಿ ತಲಾ 2, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಧಾರವಾಡ, ಹಾಸನ, ಗದಗ, ಕೊಡಗು, ಕೋಲಾರ, ಶಿವಮೊಗ್ಗ, ಉ.ಕ. ಹಾಗೂ ವಿಜಯಪುರ ಜಿಲ್ಲೆಯಲ್ಲಿ ತಲಾ 1ರಂತೆ ಒಟ್ಟು 70 ಮರಣ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next