Advertisement

ವೀಕ್ಲಿ ಎಕ್ಸ್‌ಪ್ರೆಸ್‌ ರೈಲು ಓಡಿಸಲು ನಿರ್ಧಾರ

11:17 PM Apr 27, 2019 | Team Udayavani |

ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಕೃಷ್ಣರಾಜಪುರಂ-ಕೋಚುವೇಲಿ ಮಧ್ಯೆ ಏ.29ರಿಂದ ಜುಲೈ 1ರಂದು ವಿಶೇಷ ದರದ ವೀಕ್ಲಿ ಎಕ್ಸ್‌ಪ್ರೆಸ್‌ ರೈಲು (06027) ಓಡಿಸಲು ನಿರ್ಧರಿಸಲಾಗಿದೆ. ರೈಲು ಪ್ರತಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಕೃಷ್ಣರಾಜಪುರಂನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6 ಗಂಟೆಗೆ ಕೋಚುವೇಲಿಗೆ ಬಂದು ಸೇರಲಿದೆ.

Advertisement

ಅದೇ ರೀತಿ, ಕೋಚುವೇಲಿ-ಕೃಷ್ಣರಾಜಪುರಂ ಮಧ್ಯೆ ಏ.28ರಿಂದ ಜೂನ್‌ 30ರವರೆಗೆ ಸುವಿಧಾ ವೀಕ್ಲಿ ಎಕ್ಸ್‌ಪ್ರೆಸ್‌ (82644) ರೈಲು ಓಡಿಸಲು ನಿರ್ಧರಿಸಲಾಗಿದೆ.ಕೋಚುವೇಲಿಯಿಂದ ಭಾನುವಾರ ಸಂಜೆ 5 ಗಂಟೆಗೆ ಹೊರಡುವ ರೈಲು, ಮರುದಿನ ಬೆಳಗ್ಗೆ 8.45ಕ್ಕೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಆಗಮಿಸಲಿದೆ.

ಹುಬ್ಬಳ್ಳಿ ಡಿವಿಜನ್‌ನ ಬೆಳಗಾವಿ-ಮೀರಜ್‌ ಸೆಕ್ಷನ್‌ನ ರಾಯಬಾಗ-ಚಿಂಚಿ ನಿಲ್ದಾಣಗಳ ಮಧ್ಯದಲ್ಲಿ ರೈಲು ಹಳಿ ಕಾಮಗಾರಿ ಪ್ರಯುಕ್ತ ಲೈನ್‌ ಬ್ಲಾಕೇಜ್‌ಗಾಗಿ ಏ.29ರಿಂದ ಮೇ 3ರವರೆಗೆ ಮೀರಜ್‌-ಹುಬ್ಬಳ್ಳಿ ಪ್ಯಾಸೆಂಜರ್‌ (51419) ರೈಲು ಮೀರಜ್‌ನಿಂದ 120 ನಿಮಿಷ ವಿಳಂಬವಾಗಿ ಪ್ರಯಾಣ ಆರಂಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next