Advertisement

ವಿದ್ಯುತ್ ದರ ಪರಿಷ್ಕರಣೆ ಬಗ್ಗೆ ಇಂದೇ ನಿರ್ಧಾರ; ಸಿಎಂ ಮಹತ್ವದ ಸಭೆ

10:22 AM Apr 04, 2022 | Team Udayavani |

ಬೆಂಗಳೂರು: ಕಳೆದ ನಾಲ್ಕೈದು ತಿಂಗಳಿಂದ ಚರ್ಚೆಯಲ್ಲಿರುವ ವಿದ್ಯುತ್ ದರ ಪರಿಷ್ಕರಣೆ ವಿಚಾರಕ್ಕೆ ಇಂದು ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆ ಇದ್ದು, ಏಪ್ರಿಲ್ ಮಧ್ಯಭಾಗದಲ್ಲಿ ಬೆಲೆ ಹೆಚ್ಚಳದ ನಿರೀಕ್ಷೆಯಿದೆ.

Advertisement

ಸಿಎಂ ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ಕೆಇಆರ್ಸಿ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ವಿದ್ಯುತ್ ಪರಿಷ್ಕರಣೆಗೆ ಸಂಬಂಧಪಟ್ಡ ಅಂತಿಮ ಹಂತದ ಚರ್ಚೆಗಳು ನಡೆಯುತ್ತವೆ ಎಂದು ತಿಳಿದು ಬಂದಿದೆ.

ಕೃಷಿ, ಕೈಗಾರಿಕೆ, ವಾಣಿಜ್ಯ ಹಾಗೂ ಗೃಹ ಬಳಕೆ ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಕೆಪಿಟಿಸಿಎಲ್ ನ ಐದು ಕಂಪನಿಗಳು ಈಗಾಗಲೇ ಸರಕಾರಕ್ಕೆ ತಮ್ಮ ಶಿಫಾರಸ್ಸನ್ನು ನೀಡಿದೆ. ಬೆಲೆ ಏರಿಕೆ ಅನಿವಾರ್ಯ ಎಂದು ಸರಕಾರ ಈಗಾಗಲೇ ಸ್ಪಷ್ಡಪಡಿಸಿದೆ.

ಇದನ್ನೂ ಓದಿ:ಎರಡು ವಾರದಲ್ಲಿ 12ನೇ ಬಾರಿಗೆ ಏರಿಕೆ ಕಂಡ ಪೆಟ್ರೋಲ್- ಡೀಸೆಲ್ ಬೆಲೆ!

ಈ ಮಧ್ಯೆ ಕೆಇಆರ್ ಸಿ ಆಧ್ಯಕ್ಷರ ಆಯ್ಕೆಗೂ ಸರ್ಕಸ್ ನಡೆಯುತ್ತಿದೆ. ರಾಜ್ಯದ ಮುಖ್ಯಕಾರ್ಯದರ್ಶಿ ರವಿಕುಮಾರ್ ಈ ಹುದ್ದೆ ಬಯಸಿ ಅರ್ಜಿ ಸಲ್ಲಿಸಿದ್ದು, ಆಯ್ಕೆ ಸಮಿತಿಯಿಂದ ಹೊರ ಬಂದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಎರಡು ವಿಚಾರಗಳು ಬಗೆಹರಿಯಲಿವೆ ಎಂದು ಸಿಎಂ‌ ಕಚೇರಿ‌ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next