Advertisement

Surgical strike: ಸರ್ಜಿಕಲ್‌ ದಾಳಿಗೆ 10 ನಿಮಿಷಗಳಲ್ಲಿ ನಿರ್ಧಾರ- ರಾಜನಾಥ್‌ ಸಿಂಗ್‌

11:56 AM Jun 27, 2023 | Pranav MS |

ಜಮ್ಮು: 2016 ಮತ್ತು 2019ರಲ್ಲಿ ಪಾಕಿಸ್ತಾನ ವಿರುದ್ಧ ನಡೆಸಲಾಗಿದ್ದ ಸರ್ಜಿಕಲ್‌ ದಾಳಿಗೆ ಕೇವಲ 10 ನಿಮಿಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತೀರ್ಮಾನ ಕೈಗೊಂಡಿದ್ದರು. ಹೀಗೆಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಜಮ್ಮುವಿನಲ್ಲಿ ಸೋಮವಾರ ಮಾತನಾಡಿದ ಅವರು, ಭಾರತ ಹಿಂದಿನಂತೆ ಇಲ್ಲ. ಅದು ಈಗ ಹೆಚ್ಚು ಪ್ರಭಾವಶಾಲಿಯಾಗುತ್ತಿದೆ.

Advertisement

ಅಗತ್ಯ ಬಿದ್ದರೆ ಗಡಿಯ ಒಳಭಾಗದಲ್ಲಿ ಮತ್ತು ಗಡಿಯಾಚೆಗೆ ಕೂಡ ತೆರಳಿ ದಾಳಿ ನಡೆಸಲಿದೆ. ಪುಲ್ವಾಮಾ ಮತ್ತು ಉರಿಯಲ್ಲಿನ ಘಟನೆಗಳು ದುರದೃಷ್ಟಕರ. ಅದರ ವಿರುದ್ಧ ಪ್ರತೀಕಾರ ತೀರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ಕೇವಲ ಹತ್ತು ನಿಮಿಷಗಳಲ್ಲಿ ತೀರ್ಮಾನ ಕೈಗೊಂಡಿದ್ದಾರೆ. ಪ್ರಧಾನಮಂತ್ರಿಗೆ ಖಚಿತ ತೀರ್ಮಾನ ಕೈಗೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಹೇಳಿದ್ದಾರೆ.

ನಮ್ಮ ದೇಶದ ವೀರ ಯೋಧರು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ನಿರ್ದಯೆಯಿಂದ ಕೊಂದದ್ದು ಮಾತ್ರವಲ್ಲದೆ, ಗಡಿಯಾಚೆಯೆಗೆ ತೆರಳಿ ಅವರನ್ನು ಮಟ್ಟ ಹಾಕಿದ್ದಾರೆ ಎಂದರು.

ನಿಮ್ಮ ದೇಶದ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಿ
ನೀವು ನಿಮ್ಮ ದೇಶದ ವ್ಯವಸ್ಥೆಯನ್ನು ಮೊದಲು ಸುಧಾರಿಸಿಕೊಳ್ಳಿ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ನಮಗೆ ಯಾವಾಗ ಬೇಕಿದ್ದರೂ ವಶಪಡಿಸಿಕೊಳ್ಳಲು ಸಾಧ್ಯವಿದೆ ಎಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ. ಭಯೋತ್ಪಾದನೆ ವಿಚಾರದಲ್ಲಿ ಮೋದಿ ಅಮೆರಿಕ ಪ್ರವಾಸದ ವೇಳೆ ನೀಡಿದ್ದ ಜಂಟಿ ಹೇಳಿಕೆಯನ್ನು ಟೀಕಿಸಿದ ಪಾಕ್‌ ಸರ್ಕಾರದ ನಿಲುವಿಗೆ ಆಕ್ಷೇಪ ಮಾಡಿದ ಅವರು, “ಪ್ರಧಾನಿ ಮತ್ತು ಅಧ್ಯಕ್ಷ ಮೋದಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಉಗ್ರವಾಗಿ ಖಂಡಿಸಿದ್ದಾರೆ. ಇದು ಪಾಕಿಸ್ತಾನಕ್ಕೆ ಕಿರಿಕಿರಿಯಾಗಿದೆ”ಎಂದರು ರಾಜನಾಥ್‌ ಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next