Advertisement

Natural Disaster; ವಿಪತ್ತು ನಿರ್ವಹಣ ಯೋಜನೆ ವಿಕೇಂದ್ರೀಕರಣ : ಡಿಸಿ ಮುಲ್ಲೈ ಮುಗಿಲನ್

01:24 AM Jul 01, 2024 | Team Udayavani |

ಮಂಗಳೂರು: ಜಿಲ್ಲಾ ವಿಪತ್ತು ನಿರ್ವಹಣ ಯೋಜನೆಯನ್ನು ವಿಕೇಂದ್ರೀಕರಿಸಿ, ಸ್ಥಳೀಯ ಮಟ್ಟದಲ್ಲಿ ಕಾರ್ಯಾಚರಣೆಗಳನ್ನು ನಡೆಸಲು ಸುಲಭವಾಗುವಂತೆ ಒಟ್ಟು 292 ವಿಪತ್ತು ನಿರ್ವಹಣ ಯೋಜನೆ (ಡಿಸಾಸ್ಟರ್‌ ಮ್ಯಾನೇಜ್‌ಮೆಂಟ್‌ ಪ್ಲ್ಯಾನ್ ) ಸಿದ್ಧಪಡಿಸಲಾಗಿದೆ ಹೊಸ ಯೋಜನೆ ಯಂತೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾ ಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

Advertisement

ರವಿವಾರ ನಗರದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯತ್‌ಗೆ ಒಂದರಂತೆ, ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ಗಳಿಗೆ ಒಂದರಂತೆ ಮತ್ತು ಇತರ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಅವುಗಳ ವ್ಯಾಪ್ತಿಗೆ ಹೊಂದಿಕೊಂಡಂತೆ ವಿಪತ್ತು ನಿರ್ವಹಣೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

ಈ ಮೊದಲು ಜಿಲ್ಲೆಗೆ ಒಂದೇ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣೆ ಯೋಜನೆ ಸಿದ್ಧಪಡಿಸಲಾಗುತಿತ್ತು. ಇದು ಜಿಲ್ಲಾ ಮಟ್ಟದಲ್ಲಿ ದೊಡ್ಡ ಯೋಜನೆ ಆಗಿರುವುದರಿಂದ ಸಣ್ಣ ಪ್ರದೇಶಗಳನ್ನು ತಲುಪಲು ಸಮಸ್ಯೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ಯೋಜನೆ ಯನ್ನು ವಿಕೇಂದ್ರೀಕರಿಸಲಾಗಿದೆ. ಇದರಿಂ ದಾಗಿ ಪ್ರಾಕೃತಿಕ ವಿಕೋಪದ ಸೂಕ್ಷ್ಮ ಪ್ರದೇಶ, ಅಲ್ಲಿ ಎಷ್ಟು ಕಡೆಗಳಲ್ಲಿ ಭೂ ಕುಸಿತ ಉಂಟಾಗುತ್ತದೆ, ಪ್ರದೇಶದ ಜನ ಸಂಖ್ಯೆ ಎಷ್ಟಿದೆ, ಪರಿಹಾರ ವ್ಯವಸ್ಥೆ ಏನು ಎನ್ನುವುದನ್ನು ಹಿಂದಿನ ದಾಖಲೆಗಳ ಆಧಾರದಲ್ಲಿ ಪರಿಶೀಲಿಸಿ ಪ್ರತ್ಯೇಕ 292 ಯೋಜನೆ ತಯಾರಿಸಲಾಗಿದೆ ಎಂದರು.

ಪ್ರತಿ ಯೋಜನೆಯಲ್ಲಿ ಓರ್ವ “ಇನ್ಸಿಡೆಂಟ್‌ ಕಮಾಂಡರ್‌’ ನಿಯೋಜನೆ ಮಾಡಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯಡಿ ಯಾವೆಲ್ಲ ಇಲಾಖೆಗಳ ಪ್ರತಿನಿಧಿಗಳು ಇರುತ್ತಾರೋ ಅದೇ ರೀತಿ ವಿಕೇಂದ್ರೀಕೃತ ಯೋಜನೆಯಲ್ಲೂ ಮಾನವ ಸಂಪನ್ಮೂಲಗಳನ್ನು ಕ್ರೋಢೀಕರಿಸಲಾಗಿದ್ದು, ಇನ್ಸಿಡೆಂಟ್‌ಕಮಾಂಡರ್‌ ನಿರ್ದೇಶನದಂತೆ ಅವರು ಕಾರ್ಯ ನಿರ್ವಹಿಸುತ್ತಾರೆ ಎಂದರು.

ಆ್ಯಪ್‌ ಮೂಲಕ ಕಾರ್ಯಾಚರಣೆ
ಈಗಾಗಲೇ ಇನ್ಸಿಡೆಂಟ್‌ ಕಮಾಂ ಡರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಸರ್ವೇ ನಡೆಸಿ ಯೋಜನೆಯನ್ನು ಅಂತಿಮಪಡಿಸಿದ್ದಾರೆ. ಇದರ ಆಧಾರದಲ್ಲಿ ಆ್ಯಪ್‌ ಒಂದನ್ನು ಅಭಿವೃದ್ಧಿ ಪಡಿಸಲಾಗಿದೆ. ಅಧಿಕಾರಿಗಳ ಮಟ್ಟದಲ್ಲಿ ಆ್ಯಪ್‌ ಮೂಲಕ ಕೆಲಸ ನಡೆಯುತ್ತದೆ. ರಕ್ಷಣ ಕಾರ್ಯಾಚರಣೆಗಳಿಗೆ ಸಂಬಂಧಿಸಿ ಬೇಕಾದ ವಸ್ತು, ಸಲಕರಣೆಗಳನ್ನು ಪೂರೈಸಲಾಗುತ್ತದೆ. ಈಜುಗಾರರು, ಮುಳುಗು ತಜ್ಞರು, ಆಶಾ ಕಾರ್ಯಕರ್ತೆಯರೂ ಈ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಾರೆ ಎಂದರು.

Advertisement

ಕರೆ, ವಾಟ್ಸಾಪ್‌ ಸಂದೇಶ
ಆ್ಯಪ್‌ಗೆ ವರ್ಗಾವಣೆ
ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ, ಅಧಿಕಾರಿಗಳಿಗೆ ಬರುವ ಕರೆ, ವಾಟ್ಸಾಪ್‌ ಸಂದೇಶಗಳನ್ನು ಆ್ಯಪ್‌ ಮೂಲಕ ಇನ್ಸಿಡೆಂಟ್‌ ಕಮಾಂಡರ್‌ಗೆ ವರ್ಗಾಯಿಸಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ಪರಿಶೀಲಿಸಿ, ಸೂಕ್ತ ವ್ಯವಸ್ಥೆ ಮಾಡಿ ದೂರಿನ ವಿಲೇವಾರಿ ಮಾಡಬೇಕು. ಈ ಕೆಲಸ ಈಗಾಗಲೇ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಜನರು ದೂರುಗಳು ವಾಟ್ಸಾಪ್‌ನಿಂದ ನೇರವಾಗಿ ಆ್ಯಪ್‌ಗೆ ಬರುವಂತೆ ಅಭಿವೃದ್ಧಿಪಡಿಸಲಾಗುವುದು ಎಂದರು.

ಗುಡ್ಡೆ ಅಗೆದು ಮನೆ ನಿರ್ಮಾಣ: ನಿಯಮಾವಳಿ
ಗುಡ್ಡಗಳನ್ನು ಅಗೆದು ಮನೆ ಕಟ್ಟುವುದಕ್ಕೆ ಸಂಬಂಧಿಸಿ ಪ್ರಾಕೃತಿಕ ವಿಕೋಪ ಯೋಜನೆಯಡಿ ನಿಯಮಾವಳಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಕರಣಗಳಲ್ಲಿ ಗುಡ್ಡಗಳನ್ನು 90 ಡಿಗ್ರಿ ಕೋನದಲ್ಲಿ ಕತ್ತರಿಸಿ ಕೆಳಭಾಗದಲ್ಲಿ ಮನೆಗಳನ್ನು ನಿರ್ಮಿಸಿರುವುದು, ಲೇ ಔಟ್‌ ಮಾಡಿರುವುದು ಕಂಡು ಬಂದಿದೆ. ಅಂತಹ ಕಡೆಗಳಲ್ಲಿ ತಡೆಗೋಡೆಗಳ ನಿರ್ಮಾಣ ಮಾಡುವುದರಿಂದಲೂ ಪ್ರಯೋಜನವಾಗುವುದಿಲ್ಲ. ಇದರಿಂದಾಗಿ ಗುಡ್ಡ ಕುಸಿದು ಮನೆಗಳ ಮೇಲೆ ಬೀಳುವ ಪ್ರಕರಣಗಳು ಹೆಚ್ಚಾಗಿವೆ. ಸಣ್ಣ ಜಾಗದಲ್ಲಿ ಮನೆ ಕಟ್ಟಿಕೊಂಡಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next