Advertisement

ಡಿ-14: ಸಂಜೆ 4ಗಂಟೆಗೆ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ಸಂದೇಶ್ ನೀರ್ ಮಾರ್ಗ ಸಂದರ್ಶನ

11:23 AM Dec 14, 2021 | Team Udayavani |

ಮಣಿಪಾಲ: ಕಲರ್ಸ್ ಕನ್ನಡದ ಎದೆತುಂಬಿ ಹಾಡಿದೆನು ರಿಯಾಲಿಟಿ ಶೋನಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಸಂದೇಶ್ ನೀರ್ ಮಾರ್ಗ ಮಂಗಳವಾರ(ಡಿಸೆಂಬರ್ 14) ಉದಯವಾಣಿ ಕೇಂದ್ರ ಕಚೇರಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಫೇಸ್ ಬುಕ್ ಲೈವ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

ಇದನ್ನೂ ಓದಿ:ಮಗಳ ಬರ್ತ್ ಡೇ ನೆಪವೊಡ್ಡಿ ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಹಿಂದೆ ಸರಿದ ವಿರಾಟ್

ಉದಯವಾಣಿ ಡಾಟ್ ಕಾಮ್ ನ ತೆರೆದಿದೆ ಮನೆ ಬಾ ಅತಿಥಿ ಫೇಸ್ ಬುಕ್ ಲೈವ್ ಕಾರ್ಯಕ್ರಮ (ಸಂಜೆ 4ಗಂಟೆಗೆ)ದಲ್ಲಿ ಸಂದೇಶ್ ನೀರ್ ಮಾರ್ಗ ತಮ್ಮ ಜೀವನದ ಪಯಣ, ಸಂಗೀತದ ಆಸಕ್ತಿ ಹೀಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.

ಈಗಾಗಲೇ ಲಕ್ಷಾಂತರ ಸಂಗೀತ ಪ್ರಿಯರ ಮನಗೆದ್ದಿರುವ ಸಂದೇಶ್ ನೀರ್ ಮಾರ್ಗ ಅವರ ಫೇಸ್ ಬುಕ್ ಲೈವ್ ಕಾರ್ಯಕ್ರಮ ಸಂಜೆ 4ಗಂಟೆಗೆ ನಡೆಯಲಿದ್ದು ತಪ್ಪದೇ ವೀಕ್ಷಿಸಿ. ಸಂದೇಶ್ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಇಂದು ರಾಜ್ಯಾದ್ಯಂತ ಚಿರಪರಿಚಿತರಾಗಿದ್ದಾರೆ.

ಮೂಲತಃ ಮಂಗಳೂರಿನ ನೀರ್ ಮಾರ್ಗದ ನಿವಾಸಿ ಸಂದೇಶ್. ಆರಂಭದಲ್ಲಿ ಜೀವನ ನಿರ್ವಹಣೆಗಾಗಿ ಕೊರಿಯರ್ ಬಾಯ್ ಆಗಿ ದುಡಿಯುತ್ತಿದ್ದ ಸಂದೇಶ್, ನಂತರ ರಿಕ್ಷಾ ಚಾಲಕರಾಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲ ಜೀವನ ನಿರ್ವಹಣೆಗಾಗಿ ಮೀನು ಮಾರಾಟಗಾರರಾಗಿ, ಫುಡ್ ಡೆಲಿವರಿ ಬಾಯ್ ಆಗಿ ದುಡಿದಿದ್ದರು.

Advertisement

ಹಲವಾರು ವರ್ಷಗಳಿಂದ ಭಜನೆ ಹಾಡುತ್ತಿದ್ದ ಅಭ್ಯಾಸದಿಂದಾಗಿ ನನಗೆ ಈ ಸ್ಪರ್ಧೆಯಲ್ಲಿ ಮುಂದುವರಿಯಲು ನೆರವಾಗಿದೆ. ನಿಮ್ಮೆಲ್ಲರ ಪ್ರೀತಿಯಿಂದ ಕಲರ್ಸ್ ಕನ್ನಡದ ಎದೆತುಂಬಿ ಹಾಡುವೆನು ರಿಯಾಲಿಟಿ ಶೋನಲ್ಲಿ ಈ ಹಂತದವರೆಗೆ ತಲುಪಿದ್ದೇನೆ ಎಂಬುದು ಸಂದೇಶ್ ನೀರ್ ಮಾರ್ಗ ಅವರ ವಿನಮ್ರ ನುಡಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next