Advertisement

ಈಡೇರಿದ ರೈತರ ದಶಕಗಳ ಬೇಡಿಕೆ

10:22 PM May 14, 2020 | Team Udayavani |

ಕೋಟ: ಕೋಟ ಗ್ರಾ.ಪಂ. ವ್ಯಾಪ್ತಿಯ ಗಿಳಿಯಾರು ಹಂಡೆಕೆರೆ ಭಾಗದ ಕೃಷಿಭೂಮಿಗೆ ತೆಕ್ಕಟ್ಟೆ, ಮಣೂರು ದೇವಸ ಮಾರ್ಗವಾಗಿ ವಾರಾಹಿ ನೀರು ಹರಿದು ಬಂದಿದ್ದು ಈ ಭಾಗದ ರೈತರ ದಶಕಗಳ ಬೇಡಿಕೆ ಫಲಿಸಿದೆ.

Advertisement

ಇಲ್ಲಿನ ನೂರಾರು ಎಕ್ರೆ ಕೃಷಿಭೂಮಿಯ ಬಿತ್ತನೆ, ನಾಟಿ ಮುಂತಾದ ಚಟುವಟಿಕೆಗಳಿಗೆ ವಾರಾಹಿ ನೀರು ಅಗತ್ಯವಿದ್ದು ಈ ಕುರಿತು ಸ್ಥಳೀಯ ರೈತರು ಹಲವಾರು ಬಾರಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಂತಾದವರಿಗೆ ಮನವಿ ಮಾಡಿದ್ದರು. ಇದೀಗ ಇವರ ಬೇಡಿಕೆ ಈಡೇರಿದ್ದು ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ ಹಾಗೂ ಈ ಬಾರಿ ಮುಂಗಾರು ಮಳೆಗೆ ಕಾಯದೆ ಬಿತ್ತನೆ, ನಾಟಿ ನಡೆಸಬಹುದಾದ ವಾತವರಣ ಇಲ್ಲಿ ನಿರ್ಮಾಣವಾಗಿದೆ. ಬೇಡಿಕೆಗೆ ಪೂರಕ ಪ್ರತಿಕ್ರಿಯೆ ನೀಡಿದ ಶಾಸಕರು, ಇತರ ಜನಪ್ರತಿನಿಧಿಗಳು ಹಾಗೂ ವಾರಾಹಿ ಅಧಿಕಾರಿಗಳಿಗೆ ರೈತರು ಅಭಿನಂದನೆ ಸಲ್ಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next