Advertisement

ಸಾಲ ಬಾಧೆ: ರಾಜ್ಯದಲ್ಲಿ ನಾಲ್ವರು ರೈತರ ಆತ್ಮಹತ್ಯೆ

03:45 AM Mar 05, 2017 | Team Udayavani |

ಬೆಂಗಳೂರು: ಸಾಲ ಬಾಧೆಯಿಂದ ಬೇಸತ್ತು ರಾಜ್ಯದ ವಿವಿಧೆಡೆ ಶನಿವಾರ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Advertisement

ಚಿತ್ರದುರ್ಗ ಜಿಲ್ಲೆಯ ಕಳ್ಳಿರೊಪ್ಪ ಗ್ರಾಮದ ಚಂದ್ರಪ್ಪ (74) 6 ಲಕ್ಷಕಿಂತಲೂ ಹೆಚ್ಚು ಸಾಲ ಮಾಡಿಕೊಂಡು ತೀರಿಸಲಾಗದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಎಂಬಲ್ಲಿ ಶಿವರಾಮಯ್ಯ (57) 4 ಲಕ್ಷ ರೂ. ಸಾಲ ಮಾಡಿ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿಯ ಮಾದೇಶ್‌(40) 2ಲಕ್ಷ ರೂ. ಸಾಲ ಮಾಡಿ ತೀರಿಸಲಾಗದೆ ಒತ್ತಡದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. 

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದ ರುದ್ರಪ್ಪ (50) 10 ಲಕ್ಷ ರೂ. ಸಾಲ ಮಾಡಿದ್ದು ಸಾಲಬಾಧೆಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾÃ

Advertisement

Udayavani is now on Telegram. Click here to join our channel and stay updated with the latest news.

Next