Advertisement

ಸಾಲಬಾಧೆ: ದಂಪತಿ ಆತ್ಮಹತ್ಯೆ

11:40 PM Aug 20, 2019 | Lakshmi GovindaRaj |

ಬಾದಾಮಿ: ಪ್ರವಾಹದಿಂದ ಬೆಳೆ ನಾಶ ಹಾಗೂ ಸಾಲಬಾಧೆಗೆ ಮನನೊಂದು ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಾಚಿನಗುಡ್ಡ ಗ್ರಾಮದಲ್ಲಿ ನಡೆದಿದೆ. ರಮೇಶ್‌ ಬೆಳ್ಳಿ (28) ಹಾಗೂ ಶಿವಲೀಲಾ ಬೆಳ್ಳಿ (21) ಆತ್ಮಹತ್ಯೆಗೆ ಶರಣಾದ ದಂಪತಿ. ರಮೇಶ ಮನೆಯಲ್ಲಿ ಸೀರೆಯಿಂದ ನೇಣಿಗೆ ಶರಣಾಗಿದ್ದು, ಪತ್ನಿ ಶಿವಲೀಲಾ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

4 ಎಕರೆ ಹೊಲದಲ್ಲಿನ ಬೆಳೆ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ನಲ್ಲಿ ಬೆಳೆ ಸಾಲ, ಟ್ರಾಕ್ಟರ್‌ ಸಾಲ ಸೇರಿ 7 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೂಲ ಗಳು ತಿಳಿಸಿವೆ. ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next