Advertisement

ಡೆಂಘೀ ಜ್ವರಕ್ಕೆ ಬಲಿ

12:37 AM Feb 08, 2019 | |

ವಾಡಿ: ಮಹಾಮಾರಿ ಡೆಂಘೀ ಜ್ವರಕ್ಕೆ ಪಟ್ಟಣದ ಎಸಿಸಿ ಕಾಲೋನಿ ಆಂಗ್ಲ ಮಾಧ್ಯಮ ಡಿಎವಿ ಪಬ್ಲಿಕ್‌ ಶಾಲೆ ವಿದ್ಯಾರ್ಥಿನಿ ಅಕ್ಷರಾ ಜಗನ್ನಾಥ ಕಲಶೆಟ್ಟಿ(7) ಮೃತಪಟ್ಟಿದ್ದಾಳೆ.

Advertisement

ವಿಪರೀತ ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪರೀಕ್ಷೆ ಮಾಡಿಸಲಾಗಿತ್ತು. ವೈದ್ಯರ ತಪಾಸಣೆಯಿಂದ ಡೆಂಘೀ ಎಂದು ಪತ್ತೆಯಾಗಿ ಹೆಚ್ಚಿನ ಚಿಕಿತ್ಸೆಗಾಗಿ ಎಸಿಸಿ ಸಿಮೆಂಟ್ ಕಂಪನಿ ನೆರವಿನೊಂದಿಗೆ ಹೈದ್ರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಗೆ ವೈದ್ಯರು ನಿರಂತರವಾಗಿ ಚಿಕಿತ್ಸೆ ಮುಂದುವರಿಸಿದ್ದರು. ಮೂರು ತಿಂಗಳ ಕಾಲ ಚಿಕಿತ್ಸೆ ನೀಡಿ ಸುಮಾರು 14 ಲಕ್ಷ ರೂ. ಖರ್ಚು ಮಾಡಿದರೂ ಬುಧವಾರ ಹೈದ್ರಾಬಾದ್‌ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next