Advertisement

ಬೆದರಿಕೆ : ತ್ರಿಪುರಾ ಸಿಎಂ ಕೊಂದವರಿಗೆ 5 ಲಕ್ಷ ಇನಾಮು! 

03:15 PM Aug 18, 2017 | |

ಅಗರ್ತಲಾ : ತ್ರಿಪುರಾ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

ವಿಶ್ವ ಕಮ್ಯುನಿಷ್ಟ್ ವಿರೋಧಿ ಸಭೆಗೂ ಮುನ್ನ  ಫೇಸ್‌ಬುಕ್‌ನ ನಕಲಿ ಖಾತೆ ಯಿಂದ ಬೆದರಿಕೆ ಹಾಕಲಾಗಿದ್ದು, ಯಾರಾದರು ಮಾಣಿಕ್‌ ಸರ್ಕಾರ್‌ರನ್ನು ಹತ್ಯೆಗೈದರೆ 5 ಲಕ್ಷ ರೂಪಾಯಿ ಇನಾಮು ನೀಡುವುದಾಗಿ ಬರೆಯಲಾಗಿದೆ. 

ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಾಗಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ. 

ಸಿಪಿಐ(ಎಂ) ಹಿರಿಯ ಮುಖಂಡರಾಗಿರುವ 68 ಹರೆಯದ ಸರ್ಕಾರ್‌ ಅವರು 1998 ರಿಂದ ನಿರಂತರ 19 ವರ್ಷಗಳಿಂದ ತ್ರಿಪುರಾ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next