Advertisement

ಬಾವಿಯಲ್ಲಿ ಮುಳುಗಿ ಪತ್ರಕರ್ತ ಸಾವು

11:49 PM Feb 22, 2020 | Team Udayavani |

ತುಮಕೂರು: ತಾಲೂಕಿನ ಊರ್ಡಿಗೆರೆ ಸಮೀಪದ ಕದರನಹಳ್ಳಿಯಲ್ಲಿ ಶನಿವಾರ ಮಹಾ ಶಿವರಾತ್ರಿ ಪ್ರಯುಕ್ತ ಊರಿಗೆ ಬಂದಿದ್ದ ಪತ್ರಕರ್ತ ರೋಹಿತ್‌ (39), ಬಾವಿಯಲ್ಲಿ ಈಜುವಾಗ ಸುಸ್ತಾಗಿ ಸಾವನ್ನಪ್ಪಿದ್ದಾರೆ. ಸೋದರ ಮಾವನ ತೋಟದ ಬಾವಿಯಲ್ಲಿ ಈಜಲು ಮಗಳು ಮತ್ತು ತಮ್ಮನೊಂದಿಗೆ ತೆರಳಿದ್ದ ರೋಹಿತ್‌ ತಾನು ಈಜಲು ಹೋದಾಗ ಸುಸ್ತಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರೋಹಿತ್‌ ಅವರು “ಟೈಮ್ಸ್ ಆಫ್ ಇಂಡಿಯಾ’ ವರದಿಗಾರರಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.

Advertisement

ಶಿವರಾತ್ರಿ ಹಬ್ಬಕ್ಕೆ ರಜೆ ಹಾಕಿ, ಸೋದರ ಮಾವನ ಊರಾದ ಕ‌ದರನಹಳ್ಳಿಗೆ ಬಂದಿದ್ದರು. ತೋಟದ ಬಾವಿಯಲ್ಲಿ ಈಜಲು ಹೋದಾಗ ಈ ಘಟನೆ ನಡೆದಿದೆ. ನೀರಿನಲ್ಲಿ ಮುಳುಗಿ ಬಹಳ ಹೊತ್ತಾದರೂ ಮೇಲೆ ಬಾರದ ಕಾರಣ ಬಾವಿಯಲ್ಲಿ ಹುಡುಕಾಟ ನಡೆಸಲಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಕ್ಯಾತ್ಸಂದ್ರ ಪೊಲೀಸರು ಮೃತದೇಹವನ್ನು ಮೇಲಕ್ಕೆ ಎತ್ತಿದರು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next