Advertisement

ಕೊಲ್ಲೂರು ದೇಗುಲದ ಆನೆ ಇಂದಿರಾ ಸಾವು

12:45 PM Aug 15, 2019 | sudhir |

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆನೆ ಇಂದಿರಾ ಅಸೌಖ್ಯದಿಂದ ಮಂಗಳವಾರ ರಾತ್ರಿ ಮೃತಪಟ್ಟಿದೆ.

Advertisement

ಕಳೆದ ಮೂರು ದಿನಗಳ ಹಿಂದೆ ಆನೆಗೆ ಜ್ವರ ಬಾಧಿಸಿತ್ತು. ಸ್ಥಳೀಯವಾಗಿ ಔಷಧೋಪಚಾರ ಮಾಡಿದರೂ ಜ್ವರ ಕಡಿಮೆಯಾಗದೆ ಉಲ್ಬಣಗೊಂಡ ಕಾರಣ ಮಂಗಳವಾರ ಸಕ್ರೆಬೈಲ್‌ನ ಆನೆ ವೈದ್ಯ ಡಾ| ವಿನಯ ಅವರನ್ನು ಕರೆಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಆನೆ ರಾತ್ರಿ ವೇಳೆಗೆ ಕೊನೆಯುಸಿರೆಳೆಯಿತು.

ಈ ಆನೆಯನ್ನು 22 ವರ್ಷಗಳ ಹಿಂದೆ ಬಾಳೆಹೊನ್ನೂರಿನ ಭಕ್ತರೋರ್ವರು ದೇಗುಲಕ್ಕೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು. ಪ್ರಸ್ತುತ ಆನೆಗೆ 62 ವರ್ಷಗಳಾಗಿದ್ದು, ದೇಗುಲದಿಂದ ನಾಲ್ಕೈದು ಕಿ.ಮೀ. ದೂರದ ಕಲ್ಯಾಣಿ ಗುಡ್ಡೆಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next