Advertisement

ಅಮ್ಮನ ನಿಧನದ ಸುದ್ದಿ ಕೇಳಿದ ಮಗನ ಸಾವು

03:21 PM Dec 31, 2017 | Team Udayavani |

ದುಬೈ: ತಾಯಿ ನಿಧನರಾದ ಸುದ್ದಿ ಕೇಳುತ್ತಲೇ ದುಬೈನಲ್ಲಿ ರುವ ಮಗನೂ ಕುಸಿದುಬಿದ್ದು ಸಾವಿಗೀಡಾದ ಮನಕಲಕುವ ಘಟನೆ ನಡೆದಿದೆ. 

Advertisement

ಕೇರಳದ ಕೊಲ್ಲಂ ಜಿಲ್ಲೆಯವರಾದ ಅನಿಲ್‌ ಕುಮಾರ್‌ ಗೋಪಿನಾಥನ್‌ ಎಂಬವರೇ ಮೃತಪಟ್ಟ ವ್ಯಕ್ತಿ. ಇವರು ದುಬೈನ ಟೈಲರಿಂಗ್‌ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೇರಳದಲ್ಲಿ ರುವ ತಾಯಿ ಕೌಸಲ್ಯಾ ನಿಧನರಾಗಿದ್ದಾರೆ ಎಂಬ ಸುದ್ದಿ ಯನ್ನು ಅವರಿಗೆ ತಲುಪಿಸ ಲಾಗಿತ್ತು. ವಿಚಾರ ಕೇಳುತ್ತಿದ್ದಂತೆಯೇ ಗೋಪಿನಾಥನ್‌ಗೆ ಹೃದಯಾಘಾತ ವಾಗಿದೆ.

 ಅವರನ್ನು ಆಸ್ಪತ್ರೆಗೆ ಕರೆದೊಯ್ಯು ವುದರೊಳಗೆ ಅವರು ಕೊನೆಯುಸಿರೆಳೆದಿದ್ದರು ಎಂದು ದುಬೈ ಮಾಧ್ಯಮಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next