Advertisement

ಸಕ್ರೆಬೈಲು ಕಾಡಿನಲ್ಲಿ ಹೆಣ್ಣಾನೆ ಸಾವು

11:32 PM May 25, 2019 | Team Udayavani |

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಶನಿವಾರ ಹೆಣ್ಣು ಆನೆಯೊಂದು ಮೃತಪಟ್ಟಿದೆ. ಭಾರತಿ (1 ವರ್ಷ 9ತಿಂಗಳು) ಎಂಬ ಮರಿಯಾನೆ ಅನಾರೋಗ್ಯದಿಂದ ಸಕ್ರೆಬೈಲು ಕಾಡಿನಲ್ಲಿ ಮೃತಪಟ್ಟಿದೆ.

Advertisement

2014ರಲ್ಲಿ ಹಾಸನದಲ್ಲಿ ಹೆಣ್ಣಾನೆಯೊಂದನ್ನು ಸೆರೆ ಹಿಡಿದು ಇಲ್ಲಿಗೆ ತಂದು ಭಾನುಮತಿ ಎಂದು ನಾಮಕರಣ ಮಾಡಲಾಗಿತ್ತು. ಈ ಆನೆ ಭಾರತಿಗೆ ಜನ್ಮ ನೀಡಿತ್ತು. ತನ್ನ ಚೇಷ್ಟೆ ಹಾಗೂ ಆಟದ ಮೂಲಕ ಭಾರತಿ ಪ್ರವಾಸಿಗರ ಗಮನ ಸೆಳೆಯುತ್ತಿದ್ದಳು.

ಅನಾರೋಗ್ಯದಿಂದ ಬಳಲುತ್ತಿದ್ದ ಆನೆಮರಿಗೆ ಶುಕ್ರವಾರ ಚಿಕಿತ್ಸೆ ನೀಡಲಾಗಿತ್ತು. ಇದರಿಂದ ಚೇತರಿಸಿಕೊಂಡು ಆಟವಾಡಿಕೊಂಡು, ಮೇವು ತಿನ್ನುತ್ತ ಇತ್ತು. ಆದರೆ, ರಾತ್ರಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿ ಮೃತಪಟ್ಟಿದೆ.

ಶನಿವಾರ ಬೆಳಗ್ಗೆ ಹೋಗಿ ನೋಡಿದಾಗಲೇ ಈ ಬಗ್ಗೆ ತಿಳಿದು ಬಂದಿದೆ. ಮರಿ ಮೃತಪಟ್ಟಿದ್ದನ್ನು ಕಂಡು ತಾಯಿ ಭಾನುಮತಿ ಕೆಲಕಾಲ ಆಕ್ರಂದನ ವ್ಯಕ್ತಪಡಿಸಿತು. ಅದನ್ನು ಆ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next