Advertisement

ವಾಮಾಚಾರಕ್ಕೆ ಬಂದವ ಸ್ಮಶಾನದಲ್ಲೇ ಸಾವು!

12:58 PM Apr 06, 2019 | keerthan |

ಧಾರವಾಡ: ನಗರದ ಹೊಸಯಲ್ಲಾಪುರದಲ್ಲಿರುವ ಸ್ಮಶಾನಕ್ಕೆ ವಾಮಾಚಾರ
ಮಾಡಲೆಂದು ಗುರುವಾರ ತಡರಾತ್ರಿ ಬಂದಿದ್ದ ವ್ಯಕ್ತಿಯೊಬ್ಬ ಸ್ಮಶಾನದಲ್ಲೇ
ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ನಡೆದಿದೆ.

Advertisement

ದಾವಣಗೆರೆ ಮೂಲದ ನಮಃ ಶಿವಾಯ (65) ಎಂಬ ವ್ಯಕ್ತಿಯೇ ಸ್ಮಶಾನದಲ್ಲಿ ಮೃತಪಟ್ಟವ. ಕಾರು ತೆಗೆದುಕೊಂಡು ಸ್ಮಶಾನಕ್ಕೆ ಬಂದಿದ್ದು, ಕಾರಿನಲ್ಲಿ ಪೂಜಾ ಸಾಮಗ್ರಿ, ಕುಂಕುಮ ಲೇಪಿತ ತೆಂಗಿನಕಾಯಿ, ಕಪ್ಪು ಬಟ್ಟೆಯಗೊಂಬೆಗಳು ಪತ್ತೆಯಾಗಿವೆ. ಕಾರು ನಿಲ್ಲಿಸಿ ಅದರ ಮುಂದೆ ಅರ್ಧ ಗುಂಡಿ ತೋಡಿದ್ದ
ಈತ ನಾಲ್ಕೈದು ಜನರ ಭಾವಚಿತ್ರಗಳನ್ನು ಕಪ್ಪು ದಾರದಿಂದ ಕಟ್ಟಿಕೊಂಡು ಬಂದು ಆ ಫೋಟೋಗಳನ್ನೂ ಕಾರಿನಲ್ಲಿ ಇಟ್ಟುಕೊಂಡಿದ್ದ.

ಆದರೆ, ವಾಮಾಚಾರ ಮಾಡುವ ಮುನ್ನವೇ ಕಾರಿನಲ್ಲಿ ಕುಳಿತಲ್ಲೇ ಹೃದಯಾಘಾತವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ನಡೆಸಿದಾಗ ವಾಮಾಚಾರ ವಿಷಯ ಬಹಿರಂಗಗೊಂಡಿದೆ. ಫೋಟೋದಲ್ಲಿರುವ
ವ್ಯಕ್ತಿಗಳು ಯಾರು, ಅವರಿಗೇಕೆ ಈ ವ್ಯಕ್ತಿ ವಾಮಾಚಾರ ಮಾಡಲು ಬಂದಿದ್ದ ಎನ್ನುವುದು ಪೊಲೀಸ್‌ ತನಿಖೆಯಿಂದ ಗೊತ್ತಾಗಬೇಕಿ¨

Advertisement

Udayavani is now on Telegram. Click here to join our channel and stay updated with the latest news.

Next