Advertisement

ಕಿವುಡ ಒಲಿಂಪಿಕ್ಸ್‌ ವಿಜೇತರ ನಿರ್ಲಕ್ಷಿಸಿದ ಕೇಂದ್ರ ಸರ್ಕಾರ!

12:16 PM Aug 02, 2017 | Team Udayavani |

ನವದೆಹಲಿ: ಕ್ರಿಕೆಟಿಗರು, ಒಲಿಂಪಿಕ್ಸ್‌ ಪದಕ ವಿಜೇತರು ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿ ತವರಿಗೆ ವಾಪಸ್‌ ಮರಳಿದಾಗ ಅವರಿಗೆ ಭಾರೀ ಸ್ವಾಗತ ಸಿಕ್ಕಿದ್ದನ್ನು ನೋಡಿದ್ದೇವೆ. ಅಧಿಕಾರಿಗಳು, ರಾಜಕಾರಣಿಗಳು ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಕ್ರೀಡಾಪಟುಗಳನ್ನು ಬರ ಮಾಡಿಕೊಂಡ ಉದಾಹರಣೆ ಇದೆ. ಆದರೆ ಟರ್ಕಿಯಲ್ಲಿ ನಡೆದ ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ 1 ಚಿನ್ನ ಸೇರಿದಂತೆ ಒಟ್ಟು 5 ಪದಕ ಗೆದ್ದಿರುವ ಭಾರತೀಯ ಕ್ರೀಡಾ ಪಟುಗಳನ್ನು ಸರ್ಕಾರ ನಿರ್ಲಕ್ಷಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ. 

Advertisement

ಇದರ  ವಿರುದ್ಧ ದೆಹಲಿ ವಿಮಾನ ನಿಲ್ದಾಣದಲ್ಲೇ ಕ್ರೀಡಾಪಟುಗಳು ಪ್ರತಿಭಟನೆಯನ್ನು ಮಂಗಳವಾರ ನಡೆಸಿದ್ದಾರೆ. ನಾವು ದೇಶಕ್ಕಾಗಿ ಇಷ್ಟು ಪದಕಗಳನ್ನು ಗೆದ್ದಿದ್ದೇವೆ. ನಮಗೆ ಸರ್ಕಾರ ಯಾವ ಮರ್ಯಾದೆ ನೀಡುತ್ತಿಲ್ಲ. ನಾವು ಗೆದ್ದಿರುವ ವಿಷಯವನ್ನು ಕ್ರೀಡಾ ಸಚಿವರ ಗಮನಕ್ಕೆ ತಂದಿದ್ದೇವೆ. ಸಾಯ್‌ಗೂ ತಿಳಿಸಿದ್ದೇವೆ. ಅವರ್ಯಾರಿಗೂ ನಮ್ಮ ಸಾಧನೆ ಕಾಣಿಸುತ್ತಿಲ್ಲ. ಮನಸ್ಸಿಗೆ ತುಂಬಾ ಬೇಸರ ವಾ ಗುತ್ತಿದೆ ಎಂದು ಅಥ್ಲೀಟ್‌ಗಳು ದೂರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next