Advertisement

ನಕಲಿ ಗನ್‌ ಲೈಸನ್ಸ್‌ ಕೇಸ್‌: ಕೊನೆಗೂ ಸೆರೆಸಿಕ್ಕ ಸತ್ತ ಮನುಷ್ಯನ ಭೂತ

11:37 AM May 03, 2018 | udayavani editorial |

ಹೊಸದಿಲ್ಲಿ : ನಕಲಿ ಬಂದೂಕು ಲೈಸನ್ಸ್‌ ಕೇಸಿನಲ್ಲಿ ತನಿಖೆಗೆ ಒಳಪಟ್ಟು, ಬಳಿಕ ನಾಪತ್ತೆಯಾಗಿ ಅನಂತರ ಮೃತಪಟ್ಟಿರುವುದಾಗಿ ತಿಳಿಯಲ್ಪಟ್ಟಿದ್ದ, ಡೆತ್‌ ಸರ್ಟಿಫಿಕೇಟ್‌ ಕೂಡ ಜಾರಿಗೊಂಡಿದ್ದ, ದೀಪೇಶ್‌ ಎಂಬ ರಿಯಲ್‌ ಎಸ್ಟೇಟ್‌ ಉದ್ಯಮಿಯನ್ನು ರಾಜಸ್ಥಾನದ ಎಟಿಎಸ್‌ ಅಧಿಕಾರಿಗಳು ಕೊನೆಗೂ ಬಂಧಿಸಿದ್ದಾರೆ. ಅಂತೆಯೇ  “ನಡೆದಾಡುವ ಸತ್ತ ಮನುಷ್ಯನ ಭೂತವನ್ನು ತಾವು ಸೆರೆಹಿಡಿದಿರುವುದಾಗಿ’ ರಾಜಸ್ಥಾನ ಎಟಿಎಸ್‌ನವರು ಹೇಳಿಕೊಂಡಿದ್ದಾರೆ. 

Advertisement

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಕಳೆದ ಆರು ತಿಂಗಳಲ್ಲಿ ಆರು ಬಾರಿ ತನ್ನ ವಿಳಾಸವನ್ನು ಮತ್ತು ಅನೇಕ ಬಾರಿ ಮೊಬೈಲ್‌ ಸಿಮ್‌ ಬದಲಿಸಿಕೊಂಡು ತಲೆಮರೆಸಿಕೊಂಡು “ಮೃತಪಟ್ಟಿದ್ದಾನೆ’ ಎಂದೇ ತಿಳಿಯಲ್ಪಟ್ಟಿದ್ದ ದೀಪೇಶ್‌ನನ್ನು ಪೊಲೀಸರು ಕಳೆದ ಮಂಗಳವಾರ ಮುಂಬಯಿಯಲ್ಲಿ  “ಜೀವಂತ’ ಪತ್ತೆ ಹಚ್ಚಿ ಸೆರೆ ಹಿಡಿದರು. 

ದೀಪೇಶನ ಹಾಗೆ ಬಿಎಸ್‌ಎಫ್ ಮತ್ತು ಭಾರತೀಯ ಸೇನಾಧಿಕಾರಿಗಳ ಹೆಸರಲ್ಲಿ ನಕಲಿ ಶಸ್ತ್ರಾಸ್ತ್ರ ಲೈಸನ್ಸ್‌ ಪಡೆದುಕೊಂಡಿದ್ದ 50ಕ್ಕೂ ಹೆಚ್ಚು ಮಂದಿಯನ್ನು ರಾಜಸ್ಥಾನ ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದಾರೆ. 

ದೀಪೇಶ್‌ ಹೇಳಿರುವಂತೆ ತನ್ನ ಹೆಸರಲ್ಲಿ ಕೊಡಲ್ಪಟ್ಟಿರುವ ಡೆತ್‌ ಸರ್ಟಿಫಿಕೇಟ್‌ ಕೂಡ ನಕಲಿಯಾಗಿದೆ. ತಾನು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿರುವುದರಿಂದ ತನಗೆ ಎದುರಾಳಿಗಳಿಂದ ಜೀವ ಬೆದರಿಕೆ ಇರುವ ಕಾರಣ ಸ್ವರಕ್ಷಣೆಗಾಗಿ  ತಾನು ನಕಲಿ ಬಂದೂಕು ಲೈಸನ್ಸ್‌ ಪಡೆದುಕೊಂಡಿದ್ದುದಾಗಿ ದೀಪೇಶ್‌ ಹೇಳಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next