Advertisement

13 ತಾಸು ರೋಗಿಗಳ ಮಧ್ಯೆ ಇದ್ದ ಶವ!

07:05 AM Aug 23, 2017 | Team Udayavani |

ಅಥಣಿ: ಸ್ಥಳೀಯ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ವೃದೆಟಛಿಯೊಬ್ಬರು ಮೃತಪಟ್ಟ ವಿಷಯ
ತಿಳಿದರೂ ಉಳಿದ ರೋಗಿಗಳೊಂದಿಗೆ 13 ಗಂಟೆಯವರೆಗೆ ಶವವನ್ನು ಅಲ್ಲಿಯೇ ಇರಿಸಿದ್ದ ಘಟನೆ ನಡೆದಿದೆ.

Advertisement

ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಶನಿವಾರ ಪಾರ್ಥನಹಳ್ಳಿ ಗ್ರಾಮದ ಕಾಶವ್ವ ಹಿರೇಮಠ (75) ದಾಖಲಾಗಿದ್ದರು. ಇವರು ಸೋಮವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮೃತಪಟ್ಟಿದ್ದರೂ ಮಂಗಳವಾರ ಮಧ್ಯಾಹ್ನದವರೆಗೆ ಶವ ಸಾಮಾನ್ಯ ವಾರ್ಡ್‌ನಲ್ಲಿಯೇ ಇತ್ತು. ಈ ವಿಷಯ ಅರಿತ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಶವವನ್ನು ಮಂಗಳವಾರ ಗ್ರಾಮಕ್ಕೆ ಕಳಿಸುವ ವ್ಯವಸ್ಥೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next