Advertisement

ಶಂಕರನಾರಾಯಣ: ನದಿಯಲ್ಲಿ ನಾಪತ್ತೆಯಾದ ಯುವತಿ ಶವ ಪತ್ತೆ

09:38 AM Jul 05, 2019 | Team Udayavani |

ಸಿದ್ದಾಪುರ: ನದಿಗೆ ಬಟ್ಟೆ ತೊಳೆಯಲು ಹೋಗಿ ನಾಪತ್ತೆಯಾಗಿದ್ದ ಶಂಕರನಾರಾಯಣ ಗ್ರಾಮದ ಕುಳ್ಳುಂಜೆ ಗುಂಡುಕೊಡ್ಲು ಲಕ್ಷ್ಮಣ ನಾಯ್ಕ ಅವರ ಪುತ್ರಿ ಅಮಿತಾ (21) ಅವರ ಮೃತದೇಹವು ಗುರುವಾರದಂದು ಮನೆಯಿಂದ ಅರ್ಧ ಕಿ.ಮೀ. ದೂರದ ವಾರಾಹಿ ಹೊಳೆಯಲ್ಲಿ ಪತ್ತೆಯಾಗಿದೆ.

Advertisement

ಅವರು ಬುಧವಾರ ಬೆಳಗ್ಗೆ 9.30ರ ಹೊತ್ತಿಗೆ ಬಟ್ಟೆ ತೊಳೆಯಲು ಹೋಗಿದ್ದಾಗ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಅರ್ಧ ಕಿ. ಮೀ. ದೂರದ ಹೊಳೆಯಲ್ಲಿ ಬೆಳೆದ ಮರದ ಬೇರಿಗೆ ಶವದ ಬಟ್ಟೆ ಸಿಕ್ಕಿಹಾಕಿಕೊಂಡಿತ್ತು. ಸ್ಥಳೀಯರಾದ ದಿನಕರ ಶೆಟ್ಟಿ ಅವರು ತಮ್ಮ ತೆಪ್ಪದ ಮೂಲಕ ಪೊಟರೆಯಲ್ಲಿ ಸಿಕ್ಕಿ ಹಾಕಿಕೊಂಡ ಶವವನ್ನು ಮೇಲೆತ್ತಿ ಪೊಲೀಸರಿಗೆ ಹಸ್ತಾಂತರಿಸಿದರು.

ಶಾಸಕರ ಭೇಟಿ: ಸ್ಥಳಕ್ಕೆ ಬೈಂದೂರು ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಭೇಟಿ ನೀಡಿ ಸಂತಾಪ ಸೂಚಿಸಿದರು. ಶಂಕರನಾರಾಯಣ ಪೊಲೀಸರು ಶವ ಪರೀಕ್ಷೆ ನಡೆಸಿ, ಮನೆಯವರಿಗೆ ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next