Advertisement

ನಾಪತ್ತೆಯಾಗಿದ್ದ ಹರೇಕಳದ ಯುವಕನ ಶವ ಪತ್ತೆ! ಆತ್ಮಹತ್ಯೆ ಶಂಕೆ

07:20 PM Jul 08, 2020 | sudhir |

ಉಳ್ಳಾಲ : ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಹರೇಕಳ ದ ಯುವಕನ ಶವ ಬುಧವಾರ ಜೆಪ್ಪು ಪಟ್ಲ ಸಮೀಪ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಮೃತದೇಹವನ್ನು ಹರೇಕಳ ದ ಕೊಲ್ಕೆ ಶಾಲೆ ಬಳಿಯ ಕಿಶೋರ್ ಅಡ್ಯಂತಾಯ (36) ಎಂದು ಪತ್ತೆಹಚ್ಚಲಾಗಿದೆ.

ಮನೆಯಲ್ಲಿ ತಂದೆ ಮತ್ತು ಮಗ ಇಬ್ಬರೇ ಇದ್ದು ಜೀವನದಲ್ಲಿ ಜಿಗುಪ್ಸೆ ಹೊಂದಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಇದಕ್ಕೆ ಪುಷ್ಟಿಯಾಗಿ ನಾಪತ್ತೆಯಾದ ದಿನದಂದು ನೇತ್ರಾವತಿ ಸೇತುವೆಯಲ್ಲಿ ಕೊಡೆ ಪತ್ತೆಯಾಗಿತ್ತು ಆದರೆ ಕೊಡೆ ಪತ್ತೆಯಾದ ಕುರಿತು ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ. ಯುವಕ ನಾಪತ್ತೆಯಾಗಿ ಎರಡು ದಿನಗಳ ಬಳಿಕ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಆದರೆ ಬುಧವಾರ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

ವಿಪರ್ಯಾಸವೆಂದರೆ ಆತ್ಮಹತ್ಯೆ ತಡೆಗೆ ಅತ್ತ ಶಾಸಕ ವೇದವ್ಯಾಸ ಕಾಮತ್ ಸೇತುವೆಗೆ ತಡೆ ಬೇಲಿ ಹಾಕುವ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿದ ದಿನದಂದೇ ಕೊಡೆ ಪತ್ತೆಯಾಗಿತ್ತು ಆದರೆ ಈ ಕುರಿತು ಕಂಕನಾಡಿ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next