Advertisement

ಕಷ್ಟ ಕಾಲದಲ್ಲಿ ಸಂಬಳ ನೀಡಿದ್ದೇವೆ, ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಿ: ಸಾರಿಗೆ ಸಚಿವ ಸವದಿ

12:24 PM Dec 11, 2020 | keerthan |

ಬೆಂಗಳೂರು: ಕೋವಿಡ್ ಕಷ್ಟಕಾಲದಲ್ಲಿ ನಾವು ಸಂಬಳ ನೀಡಿದ್ದೇವೆ. ಸಂಬಳಕ್ಕೆ ಹಣ ಇಲ್ಲದಾಗಲೂ ಕೊಟ್ಟಿದ್ದೇವೆ. ನೌಕರರು ಇದನ್ನೆಲ್ಲಾ ಅರ್ಥ ಮಾಡಬೇಕು. ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಾರಿಗೆ ನೌಕರರಿಗೆ ಮನವಿ ಮಾಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮನ್ನು ನಿರ್ಗತಿಕರನ್ನಾಗಿಸಲು ಸರ್ಕಾರ ಬಿಡುವುದಿಲ್ಲ. ನಿಮ್ಮ ಬೇಡಿಕೆಗಳನ್ನು ಸ್ಪಂದಿಸುವ ಕೆಲಸ ಮಾಡುತ್ತೇವೆ. ಕೋವಿಡ್ ಸಂದರ್ಭದಲ್ಲಿ ಪ್ರತಿಭಟನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗಬಾರದು. ತಕ್ಷಣ ಪ್ರತಿಭಟನೆ ನಿಲ್ಲಿಸಿ ಕೆಲಸ ಪ್ರಾರಂಭಿಸಿ ಎಂದರು.

ಇದನ್ನೂ ಓದಿ:ಬೆಳಗಾವಿ: ಸಾರಿಗೆ ನೌಕರರ ಮುಷ್ಕರದಿಂದ ಬಸ್ ಸಂಚಾರ ಸ್ಥಗಿತ : ಪ್ರಯಾಣಿಕರ ಪರದಾಟ

ಮಧ್ಯಾಹ್ನ ಯೂನಿಯನ್ ನಾಯಕರ ಸಭೆ ಕರೆಯಲಾಗಿದೆ. ಅವರೊಂದಿಗೆ ತಕ್ಷಣದ ಪರಿಹಾರದ ಬಗ್ಗೆ ಚರ್ಚಿಸುತ್ತೇವೆ ಎಂದು ಡಿಸಿಎಂ ಸವದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next