Advertisement

ಇದು ಸೋಲಲ್ಲ ನಿಜಕ್ಕೂ ನನ್ನ ಗೆಲುವು; ಈರಣ್ಣ ಗಿಡ್ಡಪ್ಪಗೋಳ

10:05 PM Nov 06, 2020 | sudhir |

ಬೀಳಗಿ: ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕಾಗಿ ತಾಲೂಕಿನ ಪಿಕೆಪಿಎಸ್‌ ಕ್ಷೇತ್ರದಿಂದ ಸ್ಪ ರ್ಧಿಸಿ ಸೋತಿರುವೆ ನಿಜ. ಅದರೆ, ಈ
ಸೋಲು ನಿಜಕ್ಕೂ ನನಗೆ ಸೋಲಿನಂತೆ ಕಂಡಿಲ್ಲ. ನನ್ನ ಎದುರಾಳಿ ರಾಜಕೀಯ ದಿಗ್ಗಜನ ಮುಂದೆ ನನಗೆ ಸಿಕ್ಕ ಸೋಲು, ಗೆಲುವಿನಷ್ಟೇ ಸಂತಸ ತಂದಿದೆ ಎಂದು ಪಿಕೆಪಿಎಸ್‌ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಈರಣ್ಣ ಗಿಡ್ಡಪ್ಪಗೋಳ ಹೇಳಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರತಿಸ್ಪ ರ್ಧಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿರುವ
ಎಸ್‌.ಆರ್‌.ಪಾಟೀಲರು ಕಾಂಗ್ರೆಸ್‌ ಪಕ್ಷದ ಮುಂಚೂಣಿ ನಾಯಕ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರು. ನಾನು ರಾಜಕೀಯ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವವನು. ಪಿಕೆಪಿಎಸ್‌ ಕ್ಷೇತ್ರದ ಒಟ್ಟು 40 ಮತಗಳಲ್ಲಿ 15 ಮತಗಳು ನನಗೆ ಲಭಿಸಿರುವುದು ಗೆಲುವಿನ ಸಂತೋಷವನ್ನೇ ನೀಡಿದೆ ಎಂದರೆ ತಪ್ಪಾಗಲಾರದು. ಸೋಲು-ಗೆಲುವು ಸಹಜ. ಸೋಲಿನಲ್ಲೂ ಗೆಲುವಿನ ಖುಷಿ ನನಗಿದೆ. ನನ್ನ ಪ್ರತಿಸ್ಪ ರ್ಧಿಯಾದವರು ರೆಸಾರ್ಟ್‌ ರಾಜಕಾರಣ ಮಾಡಿರದಿದ್ದರೆ ಖಂಡಿತವಾಗಿಯೂ ಈ ವಿಜಯ ನನ್ನದಾಗಿರುತ್ತಿತ್ತು. ಆರೋಗ್ಯಕರ ಸ್ಪರ್ಧೆಯೊಡ್ಡಿ ರಾಜಕೀಯ ಕ್ಷೇತ್ರದ ದಿಗ್ಗಜರ ಮುಂದೆ 15 ಮತಗಳನ್ನು ಪಡೆದಿರುವುದು ಸಣ್ಣ ಮಾತಲ್ಲ. ಇದು ನನ್ನ ಗೆಲುವು ಎಂದು ಭಾವಿಸಿರುವೆ. ನನ್ನನ್ನು ಬೆಂಬಲಿಸಿದ ಎಲ್ಲ ಮತದಾರರಿಗೂ ಹಾಗೂ ಬಿಜೆಪಿ ಪಕ್ಷದ ಮುಖಂಡರಿಗೂ ಅಭಿನಂದಿಸುವೆ. ಅಲ್ಲದೆ, ಸದಾ ಪಕ್ಷದ ನಿಷ್ಠಾವಂತ ಸೇವಕನಾಗಿ ಕೆಲಸ ಮಾಡುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next